ದೇಶ

ಕೊಹ್ಲಿ, ವಿಜೇಂದರ್ ನನ್ನಿಂದಲೇ ಸಾಧನೆಯ ಶಿಖರವೇರಿರುವುದು: ಡೇರಾ ಮುಖ್ಯಸ್ಥ

Vishwanath S
ನವದೆಹಲಿ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ, ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಂ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಪಂಚಕುಲಾ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು ಇದೀಗ ಗುರ್ಮೀತ್ ಜೈಲು ಸೇರಿದ್ದಾರೆ. 
ಈ ಮಧ್ಯೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಸೇರಿದಂತೆ ಖ್ಯಾತ ಕ್ರೀಡಾಪುಟಗಳಿಗೆ ಡೇರಾ ಮುಖ್ಯಸ್ಥರು ಮಾರ್ಗದರ್ಶನ ನೀಡಿರುವ ವರದಿಗಳು ಬಂದಿವೆ. 
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಮಾತನಾಡಿದ್ದ ಡೇರಾ ಮುಖ್ಯಸ್ಥರು, ತಾವು ತರಬೇತಿ ನೀಡಿರುವ ಕ್ರೀಡಾಪಟುಗಳು ಇಂದು ರಾಷ್ಟ್ರವನ್ನು ಪ್ರತಿನಿಧಿಸುತ್ತಿರುವುದಾಗಿ ಹೇಳಿದ್ದರು. ಬಾಕ್ಸರ್ ವಿಜೇಂದರ್ ಸಿಂಗ್ ದೇಶಕ್ಕಾಗಿ ಅನೇಕ ಪದಕಗಳನ್ನು ಗೆದ್ದಿದ್ದಾರೆ. ನಂತರ ವಿರಾಟ್ ಕೊಹ್ಲಿ ಸಹ ನನ್ನ ಮಾರ್ಗದರ್ಶನ ಪಡೆದಿದ್ದು ಇದೀಗ ಸಾಧನೆಯ ಶಿಖರವೇರಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.
SCROLL FOR NEXT