ರಾಜಸ್ಥಾನದ ಬಿಲ್ವಾರಾ ಜಿಲ್ಲೆಯ ಮಂಡಲ್ಘರ್ ಕ್ಷೇತ್ರದ ಭಾರತೀಯ ಜನತಾ ಪಕ್ಷ(ಬಿಜೆಪಿ) ಶಾಸಕಿ ಕೀರ್ತಿ ಕುಮಾರಿ ಅವರು ಹಂದಿ ಜ್ವರದಿಂದಾಗಿ ಮೃತಪಟ್ಟಿದ್ದಾರೆ.
50 ವರ್ಷದ ಕೀರ್ತಿ ಕುಮಾರಿ ಅವರು ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ಕೀರ್ತಿ ಅವರು 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿವೇಕ್ ವಿರುದ್ಧ ಭಾರೀ ಮತಗಳೊಂದಿಗೆ ಜಯ ಗಳಿಸಿದ್ದರು.
ಕೀರ್ತಿ ಕುಮಾರಿ ಸಾವಿಗೆ ರಾಜಸ್ಥಾನದ ಮುಖ್ಯಮಂತ್ರಿ ವಸುಂದರಾ ರಾಜೇ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವೀಟರ್ ಖಾತೆಯಲ್ಲಿ ರಾಜೇ ಅವರು ಕೀರ್ತಿ ಕುಮಾರಿ ಅವರ ಅಕಾಲಿಕ ಮರಣ. ನನಗೆ ಮತ್ತು ಬಿಜೆಪಿ ಪಕ್ಷಕ್ಕೆ ದೊಡ್ಡ ಹಿನ್ನಡೆ. ಅವರು ನನ್ನ ಕುಟುಂಬದ ಬೇರ್ಪಡಿಸದ ಭಾಗವಾಗಿದ್ದರು. ಕುಟುಂಬಸ್ಥರಿಗೆ ಕೀರ್ತಿ ಕುಮಾರಿ ಅವರ ಮರಣದ ದುಖಃವನ್ನು ತಡೆದುಕೊಳ್ಳಲು ಶಕ್ತಿಯನ್ನು ಭಗವಂತ ಕರುಣಿಸಲಿದೆ ಎಂದು ಟ್ವೀಟಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos