ದೇಶ

ನನಗೆ ಈ ಪ್ರಶ್ನೆ ಕೇಳಿಸಲಿಲ್ಲ, ಕೇಳಿಸುವುದೂ ಇಲ್ಲ: ರಾಜೀನಾಮೆ ಕುರಿತ ಪ್ರಶ್ನೆಗೆ ಉಮಾ ಭಾರತಿ

Sumana Upadhyaya
ನವದೆಹಲಿ: ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲು ಪಕ್ಷದ ವರಿಷ್ಠರು ಸೂಚಿಸಿದ್ದಾರೆ ಎಂದು ರಾಜೀವ್ ಪ್ರತಾಪ್ ರೂಢಿ ಮತ್ತು ಸಂಜೀವ್ ಬಲ್ಯನ್ ಸ್ಪಷ್ಟವಾಗಿ ತಿಳಿಸಿದ್ದು, ತಾವು ಅದಕ್ಕೆ ಸಿದ್ದರಾಗಿದ್ದೇವೆ ಎಂದು ಹೇಳಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕಿ ಉಮಾ ಭಾರತಿ ಕೂಡ ನಿನ್ನೆ ಸಚಿವೆ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು ಆದರೆ ಈ ಬಗ್ಗೆ ಅವರನ್ನು ಕೇಳಿದಾಗ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.
ಮಾಧ್ಯಮದ ವರದಿಗಾರರು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೇಳಿದಾಗ, ನನಗೆ ನಿಮ್ಮ ಪ್ರಶ್ನೆ ಕೇಳಿಸಲಿಲ್ಲ. ಕೇಳಿಸುವುದೂ ಇಲ್ಲ, ಪ್ರಶ್ನೆ ಕೇಳದಿರುವಾಗ ಉತ್ತರಿಸುವುದು ಕೂಡ ಇಲ್ಲ ಎಂದು ಹೇಳಿದ್ದಾರೆ.
SCROLL FOR NEXT