ಬಿಪಿನ್ ರಾವತ್ 
ದೇಶ

ಸೈನ್ಯದ ಮುಂದೆ ವಿವಿಧ ಆಯ್ಕೆಗಳಿವೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

"2016 ರ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ಅಂತಹಾ ಇನ್ನೂ ಅನೇಕ ಕಾರ್ಯಾಚರಣೆ ಕೈಗೊಳ್ಳಲು ಭಾರತೀಯ ಸೈನ್ಯವು ಹಲವಾರು ಆಯ್ಕೆಗಳನ್ನು ಹೊಂದಿದೆ"

ನವದೆಹಲಿ: "2016 ರ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ಅಂತಹಾ ಇನ್ನೂ ಅನೇಕ ಕಾರ್ಯಾಚರಣೆ ಕೈಗೊಳ್ಳಲು  ಭಾರತೀಯ ಸೈನ್ಯವು ಹಲವಾರು ಆಯ್ಕೆಗಳನ್ನು ಹೊಂದಿದೆ" ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇಂದು ಹೇಳಿದರು.  ಅವರು ಪತ್ರಕರ್ತ ಮತ್ತು ಭದ್ರತಾ ವಿಶ್ಲೇಷಕ ನಿತಿನ್ ಗೋಖಲೆ ಬರೆದಿರುವ "ಸೆಕ್ಯೂರಿಂಗ್ ಇಂಡಿಯಾ ದಿ ಮೋದಿ ವೇ" ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.
2015 ರ ಮ್ಯಾನ್ಮಾರ್ ಕಾರ್ಯಾಚರಣೆ ಮತ್ತು 2016 ರಲ್ಲಿ ಪಾಕಿಸ್ತಾನದ ಆಕ್ರಮಿತ ಕಾಶ್ಮೀರದಲ್ಲಿನ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ಅಂತಹ ಮತ್ತಷ್ಟು ಕಾರ್ಯಾಚರಣೆಗಳನ್ನು ಸೈನ್ಯವು ಕೈಗೆತ್ತಿಕೊಳ್ಳುವ ಸಾಮರ್ಥ್ಯ ಹೊಂದಿದೆಯೆ ಎಂದು ಗೋಖಲೆ ರಾವತ್ ಅವರನ್ನು ಪ್ರಶ್ನಿಸಿದಾಗ ರಾವತ್ ಉತ್ತರಿಸಿದರು.
"ಗಡಿರೇಖೆಯಲ್ಲಿ  ಕಾರ್ಯಾಚರಣೆಯನ್ನು ನಡೆಸುವ ಹಲವಾರು ವಿಧಾನಗಳಿವೆ. ಅದೇ ರೀತಿಯ ಕಾರ್ಯಾಚರಣೆಯನ್ನು ನಾವು ಪುನರಾವರ್ತಿಸುವುದಿಲ್ಲ ಏಕೆಂದರೆ ಯಾವುದೇ ಅದು ಪುನರಾವರ್ತನೆಯಾಗಬಾರದು. ನಾವು ಅಚ್ಚರಿಯನ್ನು ನೀಡಬೇಕಾದಲ್ಲಿ, ಹೊಸದನ್ನು ನಾವು ಯೋಜಿಸಬೇಕಾಗಿದೆ" ಸೇನಾ ಮುಖ್ಯಸ್ಥರು ಹೇಳಿದ್ದಾರೆ
ಉಗ್ರರು 18 ಭಾರತೀಯ ಸೈನಿಕರನ್ನು ಕೊಂದ ನಂತರ ಗಡಿಯುದ್ದಕ್ಕೂ ಸ್ಪಷ್ಟ ಸಂದೇಶವನ್ನು ಸಾರಲು ಮಯನ್ಮಾರ್ ಕಾರ್ಯಾಚರಣೆ ಅಗತ್ಯವಾಗಿತ್ತು. ರಾವತ್ ನುಡಿದರು. 
ನಿಯೋಜಿತ ಜೂನಿಯರ್ ಅಧಿಕಾರಿಗಳ ಕೇಡರ್ ಗಳ ಬಗೆಗೆ ಹೇಳಿದ ರಾವತ್ ಈಗ ಅವರಿಗೆ ಸೇನೆಯನ್ನು ಸೇರಲು ಅನುಮೋದಿಸಲಾಗಿದೆ ಮತ್ತು ಜನವರಿ 1, 2018 ಅವರು ಸೇನೆಯ ಭಾಗವಾಗಲಿದ್ದಾರೆ ಎಂದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್; Video

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಕೆಲಸದಿಂದ 6 ಪ್ರಾಧ್ಯಾಪಕರ ವಜಾ

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; 'ಆ' ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT