ದೇಶ

ಮಧ್ಯ ಪ್ರದೇಶ: ಕಾಂಗ್ರೆಸ್ ಮುಖಂಡ ಕಮಲ್‌ನಾಥ್‌ಗೆ ಬಂದೂಕು ತೋರಿಸಿದ ಪೊಲೀಸ್ ಪೇದೆ

Vishwanath S
ಛಿಂಢ್ವಾರ(ಮಧ್ಯಪ್ರದೇಶ): ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರ ವಿಮಾನಕ್ಕೆ ಪೊಲೀಸ್ ಪೇದೆಯೊಬ್ಬ ಬಂದೂಕು ತೋರಿಸಿದ ಘಟನೆ ಛಿಂಢ್ವಾರದ ವಿಮಾನ ನಿಲ್ದಾಣದಲ್ಲಿ ನಡೆದಿದೆ. 
ಕಮಲ್ ನಾಥ್ ಅವರು ತಮ್ಮ ಖಾಸಗಿ ವಿಮಾನದಲ್ಲಿ ದೆಹಲಿಗೆ ಹೋಗಲು ವಿಮಾನ ಹತ್ತುವಾಗ ಪೇದೆ ರತ್ನೇಶ್ ಪವಾರ್ ಎಂಬಾತ ತಮ್ಮ ಸರ್ವೀಸ್ ರೈಫಲ್ ತೋರಿಸಿದ್ದಾರೆ. 
ಇದನ್ನು ಕಂಡ ಇತರೆ ಪೊಲೀಸ್ ಅಧಿಕಾರಿಗಳು ರತ್ನೇಶ್ ರೈಫಲ್ ಕೆಳಗಿಳಿಸಿದ್ದಾರೆ. ಇಷ್ಟಾದರೂ ಆತ ಮತ್ತೊಮ್ಮೆ ಕಮಲ್ ರತ್ತ ರೈಫಲ್ ಹಿಡಿದಿದ್ದಾನೆ. ಬಳಿಕ ಆತನನ್ನು ವಶಕ್ಕೆ ಪಡೆದು ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ಪವಾರ್ ನನ್ನು ಅಮಾನತು ಮಾಡಲಾಗಿದೆ. 
SCROLL FOR NEXT