ದೇಶ

ನಿರ್ಭಯಾ ಕೊಂದವರು ಇನ್ನೂ ಜೀವಂತ; ನ್ಯಾಯ ಸಿಗುವ ನಿರೀಕ್ಷೆಯಲ್ಲಿ ತಾಯಿಯ ಅಳಲು

Raghavendra Adiga
ನವದೆಹಲಿ: "ನನ್ನ ಮಗಳ ಮೇಲೆ ಅತ್ಯಾಚಾರ ನಡೆದು ಹತ್ಯೆಯಾಗಿ ಐದು ವರ್ಷಗಳಾದರೂ  ವರ್ಷವಾದರೂ ಅಪರಾಧಿಗಳು ಮಾತ್ರ ಇನ್ನೂ ಬದುಕಿದ್ದಾರೆ. ತಪ್ಪಿಗೆ ತಕ್ಕ ಶಿಕ್ಷೆ ತಕ್ಷಣ ಜಾರಿಯಾಗುವಂತಿದ್ದಿದ್ದರೆ ಅವರಿಗೆ ಕಾನೂನಿನ ಭಯ ಇರುತ್ತಿತ್ತು. ಆದರೆ ಅವಳನ್ನು ಕೊಂದ ಅಪರಾಧಿಗಳು ಇನ್ನೂ ಉಸಿರಾಡುತ್ತಿದ್ದಾರೆ" ಇದು ನಿರ್ಭಯಾ ತಾಯಿ ಆಶಾ ದೇವಿ ಅವರ ಮಾತುಗಳು. ಐದು ವರ್ಷದ ಹಿಂದೆ ದೆಹಲಿ ಸೇರಿ ಇಡಿಯ ದೇಶವನ್ನು ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅವರು ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.
"ನಮ್ಮ ಜನರು ಬದಲಾಗಬೇಕು. ಕ್ರೂರ ಕೃತ್ಯ ಎಸಗಿದವರಿಗೆ ತಕ್ಕ ಶಾಸ್ತಿಯಾಗಬೇಕು" ಆಶಾ ದೇವಿ ಹೇಳಿದ್ದಾರೆ.
ನಿರ್ಭಯಾ ಇತಿಹಾಸ: 2012ರ ಡಿಸೆಂಬರ್‌ 16ರಂದು ದೆಹಲಿಯಲ್ಲಿ ಪ್ಯಾರಾಮೆಡಿಕಲ್‌ ವಿದ್ಯಾರ್ಥಿನಿ ನಿರ್ಭಯಾ (23) ಳ ಮೇಲೆ ಲಿಸುತ್ತಿದ್ದ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆ ವೇಳೆ ಆರು ಜನ ಕಾಮುಕರು ಆಕೆಯ ದೇಹದೊಳಕ್ಕೆ ಕಬ್ಬಿಣದ ಕಂಬಿ ತೂರಿಸಿದ್ದರು. ಇದರಿಂದಾಗಿ ಆಕೆಯ ಕರುಳು ಹೊರಬಂದಿತ್ತು ಎಂದು ನಿರ್ಭಯಾ ಳಿಗೆ ಚಿಕಿತ್ಸೆ ನಡೆಸಿದ ವೈದ್ಯರು ಹೇಳಿದ್ದರು.
ಅತ್ಯಾಚಾರದ ನಡೆದ ಹದಿಮೂರು ದಿನಗಳ ನಂತರ ಸಿಂಗಪುರದ ಆಸ್ಪತ್ರೆಯಲ್ಲಿ ನಿರ್ಭಯಾ ಸಾವನ್ನಪ್ಪಿದ್ದಳು. ಈ ಪ್ರಕರಣ ಸಂಬಂಧ ಎಲ್ಲಾ ಆರೋಪಿಗಳನ್ನೂ ಬಂಧಿಸಲಾಗಿದ್ದು ಇದರ ಪ್ರಮುಖ ಆರೋಪಿಯಾಗಿದ್ದ  ರಾಮ್‌ ಸಿಂಗ್‌ ತಿಹಾರ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಇನ್ನುಳಿದಂತೆ ಘಟನೆ ನಡೆವಾಗ ಇನ್ನೂ ಪ್ರಾಪ್ತ ವಯಸ್ಕನಾಗಿಲ್ಲದ ಬಾಲಕನನ್ನು ಮೂರು ತಿಂಗಳ ಖಾಲ ಬಾಲಮಂದಿರದಲ್ಲಿ ಇರಿಸಲಾಗಿತ್ತು. 2013ರ ಸೆಪ್ಟೆಂಬರ್‌ 13 ರಂದು ನಾಲ್ವರು ಆರೋಪಿಗಲಿಗೆ ದೆಹಲಿ ಹೈ ಕೋರ್ಟ್ ಗಲ್ಲು ಶಿಕ್ಷೆಯನ್ನು ಪ್ರಕಟಿಸಿತ್ತು.
SCROLL FOR NEXT