ಆಶಾ ದೇವಿ 
ದೇಶ

ನಿರ್ಭಯಾ ಕೊಂದವರು ಇನ್ನೂ ಜೀವಂತ; ನ್ಯಾಯ ಸಿಗುವ ನಿರೀಕ್ಷೆಯಲ್ಲಿ ತಾಯಿಯ ಅಳಲು

"ನನ್ನ ಮಗಳ ಮೇಲೆ ಅತ್ಯಾಚಾರ ನಡೆದು ಹತ್ಯೆಯಾಗಿ ಐದು ವರ್ಷಗಳಾದರೂ ವರ್ಷವಾದರೂ ಅಪರಾಧಿಗಳು ಮಾತ್ರ ಇನ್ನೂ ಬದುಕಿದ್ದಾರೆ.

ನವದೆಹಲಿ: "ನನ್ನ ಮಗಳ ಮೇಲೆ ಅತ್ಯಾಚಾರ ನಡೆದು ಹತ್ಯೆಯಾಗಿ ಐದು ವರ್ಷಗಳಾದರೂ  ವರ್ಷವಾದರೂ ಅಪರಾಧಿಗಳು ಮಾತ್ರ ಇನ್ನೂ ಬದುಕಿದ್ದಾರೆ. ತಪ್ಪಿಗೆ ತಕ್ಕ ಶಿಕ್ಷೆ ತಕ್ಷಣ ಜಾರಿಯಾಗುವಂತಿದ್ದಿದ್ದರೆ ಅವರಿಗೆ ಕಾನೂನಿನ ಭಯ ಇರುತ್ತಿತ್ತು. ಆದರೆ ಅವಳನ್ನು ಕೊಂದ ಅಪರಾಧಿಗಳು ಇನ್ನೂ ಉಸಿರಾಡುತ್ತಿದ್ದಾರೆ" ಇದು ನಿರ್ಭಯಾ ತಾಯಿ ಆಶಾ ದೇವಿ ಅವರ ಮಾತುಗಳು. ಐದು ವರ್ಷದ ಹಿಂದೆ ದೆಹಲಿ ಸೇರಿ ಇಡಿಯ ದೇಶವನ್ನು ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅವರು ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.
"ನಮ್ಮ ಜನರು ಬದಲಾಗಬೇಕು. ಕ್ರೂರ ಕೃತ್ಯ ಎಸಗಿದವರಿಗೆ ತಕ್ಕ ಶಾಸ್ತಿಯಾಗಬೇಕು" ಆಶಾ ದೇವಿ ಹೇಳಿದ್ದಾರೆ.
ನಿರ್ಭಯಾ ಇತಿಹಾಸ: 2012ರ ಡಿಸೆಂಬರ್‌ 16ರಂದು ದೆಹಲಿಯಲ್ಲಿ ಪ್ಯಾರಾಮೆಡಿಕಲ್‌ ವಿದ್ಯಾರ್ಥಿನಿ ನಿರ್ಭಯಾ (23) ಳ ಮೇಲೆ ಲಿಸುತ್ತಿದ್ದ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆ ವೇಳೆ ಆರು ಜನ ಕಾಮುಕರು ಆಕೆಯ ದೇಹದೊಳಕ್ಕೆ ಕಬ್ಬಿಣದ ಕಂಬಿ ತೂರಿಸಿದ್ದರು. ಇದರಿಂದಾಗಿ ಆಕೆಯ ಕರುಳು ಹೊರಬಂದಿತ್ತು ಎಂದು ನಿರ್ಭಯಾ ಳಿಗೆ ಚಿಕಿತ್ಸೆ ನಡೆಸಿದ ವೈದ್ಯರು ಹೇಳಿದ್ದರು.
ಅತ್ಯಾಚಾರದ ನಡೆದ ಹದಿಮೂರು ದಿನಗಳ ನಂತರ ಸಿಂಗಪುರದ ಆಸ್ಪತ್ರೆಯಲ್ಲಿ ನಿರ್ಭಯಾ ಸಾವನ್ನಪ್ಪಿದ್ದಳು. ಈ ಪ್ರಕರಣ ಸಂಬಂಧ ಎಲ್ಲಾ ಆರೋಪಿಗಳನ್ನೂ ಬಂಧಿಸಲಾಗಿದ್ದು ಇದರ ಪ್ರಮುಖ ಆರೋಪಿಯಾಗಿದ್ದ  ರಾಮ್‌ ಸಿಂಗ್‌ ತಿಹಾರ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಇನ್ನುಳಿದಂತೆ ಘಟನೆ ನಡೆವಾಗ ಇನ್ನೂ ಪ್ರಾಪ್ತ ವಯಸ್ಕನಾಗಿಲ್ಲದ ಬಾಲಕನನ್ನು ಮೂರು ತಿಂಗಳ ಖಾಲ ಬಾಲಮಂದಿರದಲ್ಲಿ ಇರಿಸಲಾಗಿತ್ತು. 2013ರ ಸೆಪ್ಟೆಂಬರ್‌ 13 ರಂದು ನಾಲ್ವರು ಆರೋಪಿಗಲಿಗೆ ದೆಹಲಿ ಹೈ ಕೋರ್ಟ್ ಗಲ್ಲು ಶಿಕ್ಷೆಯನ್ನು ಪ್ರಕಟಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

SCROLL FOR NEXT