ಪುಣೆ: ಗುಜರತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸರ್ಕಾರ ರಚಿಸುವಷ್ಟು ಬಹುಮತ ಸಿಗೋದಿಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸಂಜಯ್ ಕಾಕ್ಡೆ ಹೇಳಿದ್ದಾರೆ.
"ಸ್ಪಷ್ಟ ಬಹುಮತ ಬಿಡಿ, ಗುಜರಾತ್ ನಲ್ಲಿ ಬಿಜೆಪಿಗೆ ಸರ್ಕಾರ ರಚಿಸುವುದಕ್ಕೆ ಸಾಧ್ಯವಾಗುವಷ್ಟೂ ಬಹುಮತ ಸಿಗೋದಿಲ್ಲ, ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣವಾಗಲಿದ್ದಾರೆ ಎಂದು ಕಾಕ್ಡೆ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ತಂಡ ಗುಜರಾತ್ ನ ಲ್ಲಿ ಸಮೀಕ್ಷೆ ನಡೆಸಿರುವುದಾಗಿ ಹೇಳಿದ್ದು, ಸಮೀಕ್ಷೆಯ ಆಧಾರದಲ್ಲಿ ಈ ಹೇಳಿಕೆ ನೀಡುತ್ತಿರುವುದಾಗಿ ಸಂಸದರು ತಿಳಿಸಿದ್ದಾರೆ.
ನಾನು ಗುಜರಾತ್ ಗೆ 6 ಸದಸ್ಯರ ತಂಡವನ್ನು ಕಳಿಸಿದ್ದೆ, ಗುಜರಾತ್ ನ ಗ್ರಾಮೀಣ ಭಾಗದಲ್ಲಿ ಅವರು ಸಮೀಕ್ಷೆ ನಡೆಸಿ ಅಲ್ಲಿನ ರೈತರು, ವಾಹನ ಚಾಲಕರು, ವೇಯ್ಟರ್ ಗಳನ್ನು ಮಾತನಾಡಿಸಿದ್ದಾರೆ. ಸಮೀಕ್ಷೆಯ ಫಲಿತಾಂಶದಲ್ಲಿ ಆಡಳಿತ ವಿರೋಧಿ ಅಲೆ ಕಾಣುತ್ತಿದ್ದು ಫಲಿತಾಂಶವನ್ನು ಆಧರಿಸಿ ಬಿಜೆಪಿ ಗುಜರಾತ್ ನಲ್ಲಿ ಬಹುಮತ ಪಡೆಯುವುದಿಲ್ಲ ಎಂದು ಹೇಳುತ್ತಿರುವುದಾಗಿ ಸಂಜಯ್ ಕಾಕ್ಡೆ ಹೇಳಿದ್ದಾರೆ.
ಬಿಜೆಪಿ ಗುಜರಾತ್ ನಲ್ಲಿ ಕಳೆದ 22 ವರ್ಷಗಳಿಂದ ಅಧಿಕಾರದಲ್ಲಿದೆ. ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ರಾಜ್ಯವನ್ನು ಹೊರತುಪಡಿಸಿದರೆ ಇಡೀ ಭಾರತದಲ್ಲಿ ಒಂದು ಪಕ್ಷ ಒಂದು ರಾಜ್ಯವನ್ನು ಹಲವು ದಶಕಗಳಷ್ಟು ಸುಧೀರ್ಘವಾಗಿ ಆಳಿದ ಉದಾಹರಣೆ ಇಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos