ಪೆರಿಯಪಂಡಿ 
ದೇಶ

ತಮಿಳುನಾಡು ಪೊಲೀಸ್ ಹತ್ಯೆ: ಮತ್ತೊಬ್ಬ ಪೊಲೀಸ್ ವಿರುದ್ಧ ದೂರು ದಾಖಲಿಸಿದ ರಾಜಸ್ತಾನ ಪೊಲೀಸರು

ಚಿನ್ನ ದರೋಡೆ ಪ್ರಕರಣದ ತನಿಖೆ ನಡೆಸುತ್ತಿದ್ದ ಚೆನ್ನೈನ ಪೊಲೀಸ್ ಇನ್ಸ್ ಪೆಕ್ಟರ್ ಪೆರಿಯಪಂಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ತಮಿಳುನಾಡು...

ಚೆನ್ನೈ: ಚಿನ್ನ ದರೋಡೆ ಪ್ರಕರಣದ ತನಿಖೆ ನಡೆಸುತ್ತಿದ್ದ ಚೆನ್ನೈನ ಪೊಲೀಸ್ ಇನ್ಸ್ ಪೆಕ್ಟರ್ ಪೆರಿಯಪಂಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ತಮಿಳುನಾಡು ಪೊಲೀಸ್ ಅಧಿಕಾರಿ ಮುನಿಶೇಖರ್ ವಿರುದ್ಧ ದೂರು ದಾಖಲಿಸಿದ್ದಾರೆ. 
ಫೋರೆನ್ಸಿಕ್ ಟೆಸ್ಟ್ ನಲ್ಲಿ ಪೆರಿಯಪಂಡಿ ಅವರ ದೇಹ ಹೊಕ್ಕಿದ್ದ ಗುಂಡು ಅವರ ಪಿಸ್ತೂಲಿನದಲ್ಲ, ಬದಲಿಗೆ ಜತೆಗೆ ಹೋಗಿದ್ದ ಮುನಿಶೇಖರ್ ಪಿಸ್ತೂಲಿನ ಗುಂಡು ಎಂದು ತಿಳಿದುಬಂದಿದ್ದು ಈ ಸಂಬಂಧ ನಿರ್ಲಕ್ಷ್ಯ ಆರೋಪದಡಿ ಪೊಲೀಸ್ ಅಧಿಕಾರಿ ಮುನಿಶೇಖರ್ ವಿರುದ್ಧ ರಾಜಸ್ತಾನ ಪೊಲೀಸರು ದೂರು ದಾಖಲಿಸಿದ್ದಾರೆ. 
ದರೋಡೆಕೋರರನ್ನು ಬಂಧಿಸುವುದಕ್ಕಾಗಿ ಚೆನ್ನೈ ಪೊಲೀಸ್ ಇನ್ಸ್ ಪೆಕ್ಟರ್ ಪೆರಿಯಪಂಡಿ ನೇತೃತ್ವದ ತಂಡ ರಾಜಸ್ತಾನದ ಪಾಲಿ ಜಿಲ್ಲೆಗೆ ತೆರಳಿತ್ತು, ಈ ವೇಳೆ ಶಂಕಿತ ದರೋಡೆಕೋರರ ಬೆನ್ನಟ್ಟಿ ಹೋಗಿದ್ದ ಪೆರಿಯಪಂಡಿ ಅವರನ್ನು ಅವರದ್ದೇ ರಿವಾಲ್ವರ್ ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಎಂದು ಹೇಳಲಾಗಿತ್ತು. 
ಚೆನ್ನೈನ ಮದುರಾವೋಯಲ್ ಠಾಣೆಯಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಪೆರಿಯಪಂಡಿ ಅವರು, ಕಳೆದ ತಿಂಗಳು ಕೊಲಾಥೂರ್ ಎಂಬಲ್ಲಿ ಸುರಂಗ ತೋಡಿ 3.5 ಕೆಜಿ ಚಿನ್ನ ದೋಚಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದರು. ರಾಜಸ್ತಾನದ ಮರುಭೂಮಿಯ ಸಮೀಪ ದರೋಡೆಕೋರರು ಅಡಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅವರಲ್ಲಿ ಒಬ್ಬನನ್ನು ಇನ್ಸ್ ಪೆಕ್ಟರ್ ಹಿಡಿದಿದ್ದರು. 
ಗುಂಡೇಟಿನಿಂದ ಇನ್ಸ್ ಪೆಕ್ಟರ್ ಸ್ಥಳದಲ್ಲೇ ಮೃತಪಟ್ಟಿದ್ದು, ಜೊತೆಗಿದ್ದ ಪೊಲೀಸರಿಗೆ ಗಾಯಗಳಾಗಿದ್ದು. ನವೆಂಬರ್ 16ರಂದು ಚೆನ್ನೈನ ಆಭರಣ ಮಳಿಗೆಯಲ್ಲಿ ಕಳ್ಳತನ ನಡೆದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT