ರಾಷ್ಟ್ರಪತಿ ಭವನ 
ದೇಶ

ಸೆಕ್ಯುಲರ್ ಆಗಿ ಬದಲಾದ ರಾಷ್ಟ್ರಪತಿ ಭವನ: ಕೆರೋಲ್, ದೀಪಾವಳಿ, ಇಫ್ತಾರ್ ಗೆ ಬ್ರೇಕ್

ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕ್ರಿಸ್ಮಸ್ ಹಬ್ಬದಂದು ಈ ವರ್ಷ ಕೆರೋಲ್ ಗಾಯನ ನಿಲ್ಲಿಸಲಾಗಿದೆ. ಈ ಹಿಂದೆ....

ನವದೆಹಲಿ: ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕ್ರಿಸ್ಮಸ್ ಹಬ್ಬದಂದು ಈ ವರ್ಷ ಕೆರೋಲ್ ಗಾಯನ ನಿಲ್ಲಿಸಲಾಗಿದೆ. ಈ ಹಿಂದೆ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದ ಅವಧಿಯಲ್ಲಿ ಐದು ವರ್ಷಗಳ ಕಾಲ ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಹಾಗ ಕರೋಲ್ ಗಾಯನ ನಡೆಯುತ್ತಿತ್ತು.
ಈಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕರೋಲ್ ಗಾಯನಕ್ಕೆ ಬ್ರೇಕ್ ಹಾಕಿದ್ದು, ಅವರ ಅವಧಿಯಲ್ಲಿ ಇಫ್ತಾರ ಕೂಟ ಹಾಗೂ ದೀಪಾವಳಿ ಆಚರಣೆಗೂ ಬ್ರೇಕ್ ಹಾಕಲು ಮುಂದಾಗಿದ್ದು, ಈಗ ರಾಷ್ಟ್ರಪತಿ ಭವನ ಜಾತ್ಯತೀತವಾಗಿ ಬದಲಾಗುತ್ತಿದೆ.
ಕಲಾಂ ರಾಷ್ಟ್ರಪತಿಯಾಗಿದ್ದಾಗ ಇಫ್ತಾರ ಕೂಟ ರದ್ದುಗೊಳಿಸಲಾಗಿತ್ತು. ಆದರೆ ಪ್ರತಿಭಾ ಪಾಟೀಲ್ ಅವರು ರಾಷ್ಟ್ರಪತಿಯಾದ ನಂತರ ಅದು ಮತ್ತೆ ಮುಂದುವರೆದಿತ್ತು. ಆದರೆ ಇದುವರೆಗೂ ಕೆರೋಲ್ ಗಾಯನ ನಿಂತಿರಲಿಲ್ಲ. ಒಂದೇ ಒಂದು ಬಾರಿ ಮುಂಬೈ ದಾಳಿಯ ಹಿನ್ನೆಲೆಯಲ್ಲಿ ಮಾತ್ರ ರಾಷ್ಟ್ರಪತಿ ಭವನದಲ್ಲಿ ಕೆರೋಲ್ ಗಾಯನ ರದ್ದುಗೊಳಿಸಲಾಗಿತ್ತು. 
ರಾಷ್ಟ್ರಪತಿ ಭವನದಲ್ಲಿ ಸಾಮಾನ್ಯವಾಗಿ ಎಲ್ಲಾ ಧಾರ್ಮಿಕ ಆಚರಣೆಗಳು ನಡೆಯುತ್ತಿದ್ದವು. ಕೆಲವು ಬಾರಿ ಕೆಲ ಧಾರ್ಮಿಕ ಹಬ್ಬಗಳ ಆಚರಣೆ ರದ್ದುಗೊಳಿಸಲಾಗಿತ್ತು. ಆದರೆ ಈಗ ಎಲ್ಲಾ ಧಾರ್ಮಿಕ ಹಬ್ಬಗಳ ಆಚರಣೆಯನ್ನು ಕೈಬಿಡಲಾಗುತ್ತಿದೆ.
ಈ ವರ್ಷ ರಾಷ್ಟ್ರಪತಿ ಭವನದಲ್ಲಿ ದೀಪಾವಳಿ ಆಚರಿಸಲಾಗಿಲ್ಲ. ರಾಷ್ಟ್ರಪತಿ ಭವನಕ್ಕೆ ಕೇವಲ ಎಲ್ ಇಡಿ ದೀಪಾಲಂಕರ ಮಾತ್ರ ಮಾಡಲಾಗಿತ್ತು. ಈಗ ಕೆರೋಲ್ ಗಾಯನವನ್ನು ಕೈಬಿಡಲಾಗಿದ್ದು, ಮುಂದೆ ಇಫ್ತಾರ್ ಕೂಟ ಸಹ ರದ್ದುಗೊಳ್ಳಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಏನೇ ಆದ್ರೂ, ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

SCROLL FOR NEXT