ದೇಶ

ಕೇರಳದಲ್ಲಿ ಡಿವೈಎಫ್ಐ ಕಾರ್ಯಕರ್ತನ ಬರ್ಬರ ಹತ್ಯೆ

Lingaraj Badiger
ಆಲಪುಳ: ಕೇರಳದ ಹರಿಪಡ್ ಸಮೀಪದ ಕರುವಟ್ಟದಲ್ಲಿ ಡಿವೈಎಫ್ಐ ಕಾರ್ಯಕರ್ತರೊಬ್ಬರನ್ನು ಶುಕ್ರವಾರ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಹತ್ಯೆಯಾದ ಡಿವೈಎಫ್ಐ ಕಾರ್ಯಕರ್ತ 22 ವರ್ಷದ ಜಿಶ್ನು ಎಂದು ಗುರುತಿಸಲಾಗಿದ್ದು, ಇಂದು ಮಧ್ಯಾಹ್ನ 12.30ರ ಸುಮಾರಿಗೆ 10 ಜನರ ತಂಡವೊಂದು ದ್ವಿಚಕ್ರ ವಾಹನದಲ್ಲಿ  ಅವರ ಮನೆಗೆ ನುಗ್ಗಿ ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಶ್ನು ಡಿವೈಎಫ್ಐ ಹರಿಪಡ್ ಪ್ರದೇಶ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿದ್ದು, ಕ್ರಿಮಿನಲ್ ಗ್ಯಾಂಗ್ ವೊಂದು ಹಣಕ್ಕಾಗಿ ಅವರನ್ನು ಹತ್ಯೆ ಮಾಡಿದೆ ಎಂದು ಸ್ಥಳೀಯ ಸಿಪಿಎಂ ನಾಯಕರು ಹೇಳಿದ್ದಾರೆ.
ಸಿಪಿಎಂ ನಾಯಕರ ಪ್ರಕಾರ, ಜಿಶ್ನು ಹಾಗೂ ಇತರೆ ಡಿವೈಎಫ್ಐ ಕಾರ್ಯಕರ್ತರು ಆ ಗ್ಯಾಂಗ್ ವಿರುದ್ಧ ಪ್ರತಿಭಟನೆ ಮಾಡಿದ್ದರು. ಈ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗಿದೆ.
SCROLL FOR NEXT