ಸಂಗ್ರಹ ಚಿತ್ರ 
ದೇಶ

ಶಾಸಕರನ್ನು ಒತ್ತೆ ಇರಿಸಿಕೊಂಡಿಲ್ಲ; ಪಕ್ಷ ಒಡೆಯಲು ಡಿಎಂಕೆ ಸಂಚು: ಶಶಿಕಲಾ

ಎಐಎಡಿಎಂಕೆಯ ಯಾವುದೇ ಶಾಸಕರನ್ನೂ ತಾವು ಒತ್ತೆಯಾಳುಗಾಳಾಗಿರಿಸಿಕೊಂಡಿಲ್ಲ. ಶಾಸಕರೆಲ್ಲರೂ ರೆಸಾರ್ಟ್ ನಿಂದ ತೆರಳಲು ಸ್ವತಂತ್ರರಾಗಿದ್ದಾರೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಹೇಳಿದ್ದಾರೆ.

ಚೆನ್ನೈ: ಎಐಎಡಿಎಂಕೆಯ ಯಾವುದೇ ಶಾಸಕರನ್ನೂ ತಾವು ಒತ್ತೆಯಾಳುಗಾಳಾಗಿರಿಸಿಕೊಂಡಿಲ್ಲ. ಶಾಸಕರೆಲ್ಲರೂ ರೆಸಾರ್ಟ್ ನಿಂದ ತೆರಳಲು ಸ್ವತಂತ್ರರಾಗಿದ್ದಾರೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ  ಹೇಳಿದ್ದಾರೆ.

ಶಾಸಕರು ತಂಗಿರುವ ಕೂವತ್ತೂರಿನಲ್ಲಿರುವ ಗೋಲ್ಡನ್ ಬೇ ರೆಸಾರ್ಟ್ ಗೆ ತೆರಳಿ ಶಾಸಕರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಶಿಕಲಾ, ತಾವಾಗಲಿ ಅಥವಾ ತಮ್ಮ ಬಣದ ನಾಯಕರಾಗಲೀ  ಯಾವುದೇ ಶಾಸಕರನ್ನೂ ಒತ್ತೆಯಾಳುಗಳಾಗಿ ಇರಿಸಿಕೊಂಡಿಲ್ಲ. ಶಾಸಕರು ಇಚ್ಚಿಸಿದರೆ ಅವರು ರೆಸಾರ್ಟ್ ಬಿಟ್ಟು ಹೊರಗೆ ತೆರಳಲು ಸ್ವತಂತ್ರರು ಎಂದು ಹೇಳಿದ್ದಾರೆ.

"ಪನ್ನೀರ್ ಸೆಲ್ವಂ ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ತಾವೇ ಶಾಸಕರನ್ನು ಬಲವಂತವಾಗಿ ಒತ್ತೆ ಇಟ್ಟಿಕೊಂಡಿರುವಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಕ್ಷದಲ್ಲಿನ ಭಿನ್ನಮತಕ್ಕೆ ಡಿಎಂಕೆ ಪಕ್ಷವೇ  ನೇರಕಾರಣವಾಗಿದ್ದು, ಪಕ್ಷವನ್ನು ಒಡೆಯುವ ಮೂಲಕ ತಾನು ಅಧಿಕಾರ ಹಿಡಿಯಲು ಡಿಎಂಕೆ ಹವಣಿಸುತ್ತಿದೆ. ಆದರೆ ಪಕ್ಷ ಇಬ್ಭಾಗವಾಗಲು ನಾನು ಬಿಡುವುದಿಲ್ಲ. ಜಯಲಲಿತಾ ಅವರಿರುವಾಗ ಎಐಎಡಿಎಂಕೆ ಪಕ್ಷ ಹೇಗೆ  ಅಖಂಡವಾಗಿತ್ತೋ ಈಗಲೂ ಪಕ್ಷ ಅಖಂಡವಾಗಿರುತ್ತದೆ. ಯಾವುದೇ ಹಿತಾಸಕ್ತಿಗಳಿಂದ ಪಕ್ಷ ಬೇರ್ಪಡಿಸಲು ಸಾಧ್ಯವಿಲ್ಲ".

ಪನ್ನೀರ್ ಸೆಲ್ವಂ ಬಣದ ನಾಯಕರು ಪಕ್ಷ ಮಹಿಳಾ ಶಾಸಕಿಯರಿಗೆ ಬೆದರಿಕೆ ಹಾಕುವ ಮೂಲಕ ತಮ್ಮತ್ತ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಶಶಿಕಲಾ ಆರೋಪಿಸಿದರು.

ಶಾಸಕರೊಂದಿಗೆ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಲಿರುವ ಚಿನ್ನಮ್ಮ
ಇನ್ನು ಇಂದು ರಾತ್ರಿ ಶಾಸಕರೊಂದಿಗೆ ರೆಸಾರ್ಟ್ ನಲ್ಲೇ ತಂಗಲು ಚಿನ್ನಮ್ಮ ಶಶಿಕಲಾ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಶಾಸಕರು ತಂಗಿರುವ ಗೋಲ್ಡನ್ ಬೇ ರೆಸಾರ್ಟ್ ನಲ್ಲೇ ಪ್ರತ್ಯೇಕ ಕೊಠಡಿಯಲ್ಲಿ ತಂಗಲು  ಶಶಿಕಲಾ ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಾಳೆ ಬೆಳಗ್ಗೆ ಸುಮಾರು 10.30ಕ್ಕೆ ಅಕ್ರಮ ಆಸ್ತಿ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಲಿದ್ದು, ತೀರ್ಪಿನ ಮೇಲೆ ಇದೀಗ ತಮಿಳುನಾಡು ರಾಜಕೀಯ ಬಿಕ್ಕಟ್ಟಿನ ಭವಿಷ್ಯ ಆಧಾರವಾಗಿದೆ. ಒಂದು ವೇಳೆ ನಾಳೆ  ಶಶಿಕಲಾ ಅವರಿಗೆ ಶಿಕ್ಷೆಯಾದರೆ, ಆಗ ಪನ್ನೀರ್ ಸೆಲ್ವಂ ಅವರ ದಾರಿ ಸುಗಮವಾಗಲಿದೆ. ಒಂದು ವೇಳೆ ಶಶಿಕಲಾ ಪರವಾಗಿ ತೀರ್ಪು ಬಂದರೆ ಆಗ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ವಿಶೇಷ ಅಧಿವೇಶನ ಕರೆದು ಬಹುಮತ  ಸಾಬೀತುಪಡಿಸಲು ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಅವರಿಗೆ ಸೂಚಿಸುವ ಸಾಧ್ಯತೆ ಗಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT