ಇರೋಮ್ ಶರ್ಮಿಳಾ 
ದೇಶ

ಎಎಫ್ಎಸ್ ಪಿಎ ಉಗ್ರವಾದಕ್ಕೆ ಪರಿಹಾರ ಅಲ್ಲ, ರೋಗ ಉಲ್ಬಣಕ್ಕೆ ಕಾರಣ; ಇರೋಮ್ ಶರ್ಮಿಳಾ ಪಕ್ಷ

ಉಗ್ರವಾದ ನಿರ್ಮೂಲನೆಗೆ ಸೇನಾ ಪಡೆಗೆ ವಿಶೇಷ ಅಧಿಕಾರ (ಎಎಫ್ಎಸ್ ಪಿಎ) ಪರಿಹಾರವಲ್ಲ, ಬದಲಾಗಿ ರೋಗ ಮತ್ತಷ್ಟು ಉಲ್ಬಣವಾಗಲು ಕಾರಣವಾಗುತ್ತದೆ ಎಂದು ಇರೋಮ್ ಶರ್ಮಿಳಾ ಅವರ ಪಕ್ಷ ಪಿಆರ್ ಜೆಎ

ನವದೆಹಲಿ: ಉಗ್ರವಾದ ನಿರ್ಮೂಲನೆಗೆ ಸೇನಾ ಪಡೆಗೆ ವಿಶೇಷ ಅಧಿಕಾರ (ಎಎಫ್ಎಸ್ ಪಿಎ) ಪರಿಹಾರವಲ್ಲ, ಬದಲಾಗಿ ರೋಗ ಮತ್ತಷ್ಟು ಉಲ್ಬಣವಾಗಲು ಕಾರಣವಾಗುತ್ತದೆ ಎಂದು ಇರೋಮ್ ಶರ್ಮಿಳಾ ಅವರ ಪಕ್ಷ ಪಿಆರ್ ಜೆಎ ಅಭಿಪ್ರಾಯಪಟ್ಟಿದೆ. 
ಮಣಿಪುರದಲ್ಲಿ ಸೇನಾ ಪಡೆಗೆ ವಿಶೇಷ ಅಧಿಕಾರ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇರೋಮ್ ಶರ್ಮಿಳಾ ಅವರ ಪಕ್ಷ ಪಿಆರ್ ಜೆಎ, 1980 ರಲ್ಲಿ ರಾಜ್ಯದಲ್ಲಿ ಎಎಫ್ಎಸ್ ಪಿಎ ಜಾರಿಗೆ ತರುವುದಕ್ಕೂ ಮುನ್ನ ಕೇವಲ ನಾಲ್ಕು ಬಂಡುಕೋರ ಸಂಘಟನೆಗಳಿದ್ದವು. ಆದರೆ ಸೇನಾ ಪಡೆಗೆ ವಿಶೇಷ ಅಧಿಕಾರ (ಎಎಫ್ಎಸ್ ಪಿಎ) ನೀಡಿದ ನಂತರ 32 ಕ್ಕೆ ಏರಿಕೆಯಾಗಿವೆ ಎಂದು ಹೇಳಿದೆ. 
ಸೇನಾ ಪಡೆಗೆ ವಿಶೇಷ ಅಧಿಕಾರ ನೀಡಿರುವುದನ್ನು ವಿರೋಧಿಸಿ 16 ವರ್ಷಗಳ ಸುದೀರ್ಘ ಹೋರಾಟ ನಡೆಸಿರುವ ಇರೋಮ್ ಶರ್ಮಿಳಾ ಅವರ ಪಿಆರ್ ಜೆಎ, ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, 60 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 
ಭಯೋತ್ಪಾದನೆ ವಿರುದ್ಧ ಹೋರಾಡಲು ಕಾಯ್ದೆ ಹಾಗೂ ಯೋಜನೆಗಳ ಅಗತ್ಯವಿದೆ ಆದರೆ ಎಎಫ್ಎಸ್ ಪಿಎ ಇವುಗಳ ಪೈಕಿ ಅಲ್ಲ. ಎಎಫ್ಎಸ್ ಪಿಎ ಉಗ್ರವಾದಕ್ಕೆ ಪರಿಹಾರ ಅಲ್ಲ ಎಂದು ಪಿಆರ್ ಜೆಎ ಹೇಳಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT