ಇರೋಮ್ ಶರ್ಮಿಳಾ 
ದೇಶ

ಎಎಫ್ಎಸ್ ಪಿಎ ಉಗ್ರವಾದಕ್ಕೆ ಪರಿಹಾರ ಅಲ್ಲ, ರೋಗ ಉಲ್ಬಣಕ್ಕೆ ಕಾರಣ; ಇರೋಮ್ ಶರ್ಮಿಳಾ ಪಕ್ಷ

ಉಗ್ರವಾದ ನಿರ್ಮೂಲನೆಗೆ ಸೇನಾ ಪಡೆಗೆ ವಿಶೇಷ ಅಧಿಕಾರ (ಎಎಫ್ಎಸ್ ಪಿಎ) ಪರಿಹಾರವಲ್ಲ, ಬದಲಾಗಿ ರೋಗ ಮತ್ತಷ್ಟು ಉಲ್ಬಣವಾಗಲು ಕಾರಣವಾಗುತ್ತದೆ ಎಂದು ಇರೋಮ್ ಶರ್ಮಿಳಾ ಅವರ ಪಕ್ಷ ಪಿಆರ್ ಜೆಎ

ನವದೆಹಲಿ: ಉಗ್ರವಾದ ನಿರ್ಮೂಲನೆಗೆ ಸೇನಾ ಪಡೆಗೆ ವಿಶೇಷ ಅಧಿಕಾರ (ಎಎಫ್ಎಸ್ ಪಿಎ) ಪರಿಹಾರವಲ್ಲ, ಬದಲಾಗಿ ರೋಗ ಮತ್ತಷ್ಟು ಉಲ್ಬಣವಾಗಲು ಕಾರಣವಾಗುತ್ತದೆ ಎಂದು ಇರೋಮ್ ಶರ್ಮಿಳಾ ಅವರ ಪಕ್ಷ ಪಿಆರ್ ಜೆಎ ಅಭಿಪ್ರಾಯಪಟ್ಟಿದೆ. 
ಮಣಿಪುರದಲ್ಲಿ ಸೇನಾ ಪಡೆಗೆ ವಿಶೇಷ ಅಧಿಕಾರ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇರೋಮ್ ಶರ್ಮಿಳಾ ಅವರ ಪಕ್ಷ ಪಿಆರ್ ಜೆಎ, 1980 ರಲ್ಲಿ ರಾಜ್ಯದಲ್ಲಿ ಎಎಫ್ಎಸ್ ಪಿಎ ಜಾರಿಗೆ ತರುವುದಕ್ಕೂ ಮುನ್ನ ಕೇವಲ ನಾಲ್ಕು ಬಂಡುಕೋರ ಸಂಘಟನೆಗಳಿದ್ದವು. ಆದರೆ ಸೇನಾ ಪಡೆಗೆ ವಿಶೇಷ ಅಧಿಕಾರ (ಎಎಫ್ಎಸ್ ಪಿಎ) ನೀಡಿದ ನಂತರ 32 ಕ್ಕೆ ಏರಿಕೆಯಾಗಿವೆ ಎಂದು ಹೇಳಿದೆ. 
ಸೇನಾ ಪಡೆಗೆ ವಿಶೇಷ ಅಧಿಕಾರ ನೀಡಿರುವುದನ್ನು ವಿರೋಧಿಸಿ 16 ವರ್ಷಗಳ ಸುದೀರ್ಘ ಹೋರಾಟ ನಡೆಸಿರುವ ಇರೋಮ್ ಶರ್ಮಿಳಾ ಅವರ ಪಿಆರ್ ಜೆಎ, ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, 60 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 
ಭಯೋತ್ಪಾದನೆ ವಿರುದ್ಧ ಹೋರಾಡಲು ಕಾಯ್ದೆ ಹಾಗೂ ಯೋಜನೆಗಳ ಅಗತ್ಯವಿದೆ ಆದರೆ ಎಎಫ್ಎಸ್ ಪಿಎ ಇವುಗಳ ಪೈಕಿ ಅಲ್ಲ. ಎಎಫ್ಎಸ್ ಪಿಎ ಉಗ್ರವಾದಕ್ಕೆ ಪರಿಹಾರ ಅಲ್ಲ ಎಂದು ಪಿಆರ್ ಜೆಎ ಹೇಳಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT