ಕಾಝಿರಂಗ ರಾಷ್ಟ್ರೀಯ ಉದ್ಯಾನ 
ದೇಶ

ಕಾಝಿರಂಗ ಕುರಿತು ವರದಿ: ಹುಲಿ ಸಂರಕ್ಷಿತ ಅಭಯಾರಣ್ಯ ಪ್ರವೇಶಕ್ಕೆ ಬಿಬಿಸಿಗೆ 5 ವರ್ಷ ನಿಷೇಧ

ಅಸ್ಸಾಂ ನ ಕಾಝಿರಂಗ ರಾಷ್ಟ್ರೀಯ ಉದ್ಯಾನ (ಹುಲಿ ಸಂರಕ್ಷಿತ ಅಭಯಾರಣ್ಯ)ದಲ್ಲಿನ ಕಠಿಣ ರಕ್ಷಣಾ ಕ್ರಮಗಳನ್ನು ಪ್ರಶ್ನಿಸಿದ್ದ ಬಿಬಿಸಿ ಚಾನಲ್ ಗೆ ಅಭಯಾರಣ್ಯ ಪ್ರವೇಶಿಸದಂತೆ 5 ವರ್ಷಗಳ ಕಾಲ ನಿಷೇಧ...

ನಾಗ್ ಪುರ: ಅಸ್ಸಾಂ ನ ಕಾಝಿರಂಗ ರಾಷ್ಟ್ರೀಯ ಉದ್ಯಾನ (ಹುಲಿ ಸಂರಕ್ಷಿತ ಅಭಯಾರಣ್ಯ)ದಲ್ಲಿನ ಕಠಿಣ ರಕ್ಷಣಾ ಕ್ರಮಗಳನ್ನು ಪ್ರಶ್ನಿಸಿದ್ದ ಬಿಬಿಸಿ ಚಾನಲ್ ಗೆ ಅಭಯಾರಣ್ಯ ಪ್ರವೇಶಿಸದಂತೆ 5 ವರ್ಷಗಳ ಕಾಲ ನಿಷೇಧ ವಿಧಿಸಲಾಗಿದೆ. 
ಒನ್ ವರ್ಲ್ಡ್: ಕಿಲ್ಲಿಂಗ್ ಫಾರ್ ಕನ್ಸರ್ವೇಷನ್ (One World: Killing for Conservation) ಶೀರ್ಷಿಕೆಯಡಿ ಬಿಬಿಸಿಯ ದಕ್ಷಿಣ ಏಷ್ಯಾದ ಪ್ರತಿನಿಧಿ ಜಸ್ಟಿನ್ ರೋಲಟ್ ವರದಿ ಪ್ರಕಟಿಸಿದ್ದರು. ಘೇಂಡಾ ಮೃಗಗಳಿಗೆ ಅಪಾಯಕಾರಿ ಎಂದು ಕಂಡುಬಂದಲ್ಲಿ ಅಂತಹ ವ್ಯಕ್ತಿಯನ್ನು ಗುಂಡಿಟ್ಟು ಕೊಲ್ಲುವುದಕ್ಕೆ ಕಾಝಿರಂಗ ರಾಷ್ಟ್ರೀಯ ಉದ್ಯಾನದಲ್ಲಿರುವ ಅರಣ್ಯಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಹುಲಿ, ಘೇಂಡಾ ಮೃಗಗಳ ಸಂರಕ್ಷಣೆಗಾಗಿ ಕೈಗೊಂಡಿರುವ ಈ ಕಠಿಣ ನಿರ್ಧಾರವನ್ನು ಬಿಬಿಸಿ ತನ್ನ ವರದಿಯಲ್ಲಿ ಪ್ರಶ್ನಿಸಿತ್ತು. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಫೆ.15 ರಂದು ವರದಿ ಪ್ರಕಟಿಸಿತ್ತು. 
ಬಿಬಿಸಿ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ರಾಷ್ಟ್ರೀಯ ಹುಲಿ ಸಂರಕ್ಷಿತ ಅಭಯಾರಣ್ಯ ಪ್ರಾಧಿಕಾರ (ಎನ್ ಟಿಸಿಎ) ಅಭಯಾರಣ್ಯ ಪ್ರವೇಶಿಸದಂತೆ ಬಿಬಿಸಿಗೆ 5 ವರ್ಷಗಳ ಕಾಲ ನಿಷೇಧ ಹೇರಿದೆ. ನಿಷೇಧ ವಿಧಿಸಿರುವುದರ ಬಗ್ಗೆ ಅಭಯಾರಣ್ಯದ ವಾರ್ಡನ್ ಗಳಿಗೂ ಮಾಹಿತಿ ನೀಡಲಾಗಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT