ದೇಶ

ದೆಹಲಿಯಲ್ಲಿ ಇಬ್ಬರು ಭಯೋತ್ಪಾದಕರ ಬಂಧನ

Vishwanath S

ನವದೆಹಲಿ: ದೆಹಲಿಯ ಭಯೋತ್ಪಾದನ ನಿಗ್ರಹ ದಳ ಪೊಲೀಸರು ಇಂದು ಬೆಳಗ್ಗೆ ಕೆಸಿಪಿ ಸಂಘಟನೆಯ ಕಮಾಂಡರ್ ಮುಖ್ಯಸ್ಥ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

ಪೂರ್ವ ದೆಹಲಿಯ ಮಯೂರ್ ವಿಹಾರದಲ್ಲಿ ನೆಲೆಸಿದ್ದ ಕಮಾಂಡರ್ ರಂಜಿತ್ ಅಲಿಯಾಸ್ ರಿಕಿ ಎಂಬಾತನನ್ನು ಬಂಧಿಸಿದ್ದಾರೆ. ಇದೇ ವೇಳೆ ರಂಜಿತ್ ಜತೆ ನೆಲೆಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಣಿಪುರದಲ್ಲಿ ನಡೆದ ಹಲವು ಉಗ್ರ ದಾಳಿಗಳ ರೂವಾರಿಯಾಗಿದ್ದ ರಂಜಿತ್ . ಯಾರನ್ನೊ ಭೇಟಿ ಮಾಡಲು ಮಹಿಳೆಯೊಂದಿಗೆ ಸೇರಿ ದೆಹಲಿಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಂಜಿತ್ ನನ್ನು ಇಂದು ಮಧ್ಯಾಹ್ನ ಕೋರ್ಟ್ ಗೆ ಹಾಜರುಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ. ಕೆಸಿಪಿ ಉಗ್ರ ಸಂಘಟನೆ 2012ರ ಬಳಿಕ ಕಾರ್ಯಾರಂಭಿಸಿತ್ತು.

SCROLL FOR NEXT