ದೇಶ

ಬಿಹಾರ ದೋಣಿ ದುರಂತ: ನಿರ್ವಾಹಕನ ವಿರುದ್ಧ ಎಫ್ ಐಆರ್ ದಾಖಲು

Sumana Upadhyaya
ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಗಂಗಾ ನದಿಯಲ್ಲಿ ದೋಣಿ ಮಗುಚಿ 24 ಜನರು ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ದೋಣಿಯ ನಿರ್ವಾಹಕರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ದುರ್ಘಟನೆ ನಡೆದ ಸಂದರ್ಭದಲ್ಲಿ ನಿರ್ವಾಹಕರು ಕೂಡ ದೋಣಿಯಲ್ಲಿದ್ದರು. ಅದೃಷ್ಟವಶಾತ್ ಬದುಕುಳಿದಿದ್ದಾರೆ.
ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಹೊತ್ತು ನದಿಯಲ್ಲಿ ದೋಣಿ ನಡೆಸಿದ್ದಕ್ಕಾಗಿ ನಿರ್ವಾಹಕರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಗಾಳಿಪಟ ಉತ್ಸವ ಮುಗಿಸಿಕೊಂಡು ವಾಪಸಾಗುತ್ತಿದ್ದವರನ್ನು ಹೇರಿಕೊಂಡು ದೋಣಿ ಸಾಗುತ್ತಿತ್ತು. ಅದರಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಜನರಿದ್ದರು ಎಂದು ತೀರದಲ್ಲಿ ನಿಂತು ಫೋಟೋ ತೆಗೆದಿದ್ದವರ ಛಾಯಾಚಿತ್ರ ಹೇಳುತ್ತದೆ.
ದೋಣಿಯಲ್ಲಿ ಸುಮಾರು 40 ಜನರಿದ್ದು ಅವರಲ್ಲಿ 24 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ.
SCROLL FOR NEXT