ಪಂಜಾಬ್ ರಾಜ್ಯದ ಉಪ ಮುಖ್ಯಮಂತ್ರಿ ಸುಖ್ಬೀರ್ ಬಾದಲ್ 
ದೇಶ

ಸಿಧು 'ಮಾನವ ಬಾಂಬ್' ಇದ್ದಂತೆ: ಸುಖ್ಬೀರ್ ಬಾದಲ್

ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಂಸದ ನವಜೋತ್ ಸಿಂಗ್ ಸಿಧು ಅವರು 'ಮಾನವ ಬಾಂಬ್' ಇದ್ದಂತೆ ಎಂದು ಪಂಜಾಬ್ ರಾಜ್ಯದ ಉಪ ಮುಖ್ಯಮಂತ್ರಿ ಸುಖ್ಬೀರ್ ಬಾದಲ್ ಅವರು ಸೋಮವಾರ...

ಲುಧಿಯಾನಾ: ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಂಸದ ನವಜೋತ್ ಸಿಂಗ್ ಸಿಧು ಅವರು 'ಮಾನವ ಬಾಂಬ್' ಇದ್ದಂತೆ ಎಂದು ಪಂಜಾಬ್ ರಾಜ್ಯದ ಉಪ ಮುಖ್ಯಮಂತ್ರಿ ಸುಖ್ಬೀರ್ ಬಾದಲ್ ಅವರು ಸೋಮವಾರ ಹೇಳಿದ್ದಾರೆ.

ನವಜೋತ್ ಸಿಂಗ್ ಸಿಧು ವಿರುದ್ಧ ಕಿಡಿಕಾಡಿರುವ ಸುಖ್ಬೀರ್ ಬಾದಲ್ ಅವರು, ಸಿಧು ಅವರು 'ಮಾನವ ಬಾಂಬ್' ಇದ್ದಂತೆ. ಯಾವಾಗ ಬೇಕಾದರೂ ಸ್ಫೋಟಗೊಳ್ಳಬಹುದು. ಇದರಿಂದ ಸಾಕಷ್ಟು ಹಾನಿಯುಂಟಾಗಲಿದೆ. ಸಿಧು ಅವರಿಗೆ ಸಾಕಷ್ಟು ಅಹಂಕಾರವಿದ್ದು, 6 ತಿಂಗಳೊಳಗಾಗಿ ಅವರು ಕಾಂಗ್ರೆಸ್ ತೊರೆದು, ರಾಹುಲ್ ವಿರುದ್ಧ ಮಾತನಾಡುತ್ತಾರೆಂಬುದಕ್ಕೆ ನಾನು ಖಾತರಿಕೊಡುತ್ತೇನೆಂದು ಹೇಳಿದ್ದಾರೆ.

ನಿನ್ನೆಯಷ್ಟೇ ಕಾಂಗ್ರೆಸ್ ಗೆ ಸೇರ್ಪಡೆ ಗೊಂಡಿದ್ದ ನವಜೋತ್ ಸಿಂಗ್ ಸಿಧು ಅವರು, ಸುಖ್ಬೀರ್ ಬಾದಲ್ ವಿರುದ್ದ ಕೆಂಡ ಕಾರಿದ್ದರು. ಸರ್ಕಾರ ರಾಜ್ಯವನ್ನು ನಾಶ ಮಾಡುತ್ತಿದ್ದು, ಪಂಜಾಬ್ ನ್ನು ವಿಮೋಚನೆಗೊಳಿಸಲು ಶ್ರಮಪಡಿಸಲಾಗುತ್ತಿದೆ. ಇದನ್ನು ನನ್ನ ವೈಯಕ್ತಿಕ ಹೋರಾಟವಲ್ಲ, ನಮ್ಮೆಲ್ಲರ ಹೆಮ್ಮೆಯ ಪ್ರತೀಕವಾಗಿರುವ ಪಂಜಾಬ್ ರಾಜ್ಯದ ಅಸ್ತಿತ್ವದಕ್ಕಾಗಿ ಆಗಿದೆ. ಪಂಜಾಬ್ ರಾಜ್ಯದ ವಿಮೋಚನೆಗಾಗಿ ಆಗಿದೆ. ಭಾರತದ ಆಹಾರ ದಿವಾಳಿಕೋರರ ಬಳಿ ಹೇಗೆ ಹೋಯಿತೆಂಬುದನ್ನು ಪ್ರತೀಯೊಬ್ಬರು ಆಲೋಚಿಸಬೇಕಿದೆ.

ಜನರಿಗಾಗಿ ಆಗಿದ್ದ ಸರ್ಕಾರ, ಇದೀಗ ಕುಟುಂಬಕ್ಕಾಗಿ ಆಗಿ ಹೋಗಿದೆ. ಶೀಘ್ರದಲ್ಲಿಯೇ ಬಾದಲ್ ಅವರ ರಹಸ್ಯಗಳನ್ನು ಬಹಿರಂಗಪಡಿಸುತ್ತೇನೆ. ನಾನೊಬ್ಬ ಯೋಧನಾಗಿದ್ದು, ಪಂಜಾಬ್ ಗಾಗಿ ಹೋರಾಟ ಮಾಡಲು ಸಿದ್ಧನಿದ್ದೇನೆ. ಅಕಾಲಿ ದಳ ಉತ್ತಮ ಗುಂಪಾಗಿದ್ದು, ಇದೀಗ ಕುಟುಂಬದ ಸರ್ಕಾರವಾಗಿ ಹೋಗಿದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT