ಭಾರತೀಯ-ಅಮೆರಿಕನ್ ಗೂ ತಟ್ಟಿದ ಟ್ರಂಪ್ ಕಠಿಣ ವಲಸೆ ನೀತಿ: ವಲಸೆ ಬಗ್ಗೆ ಪ್ರಶ್ನೆಗಳ ಸುರಿಮಳೆ! 
ದೇಶ

ಭಾರತೀಯ-ಅಮೆರಿಕನ್ ಗೂ ತಟ್ಟಿದ ಟ್ರಂಪ್ ಕಠಿಣ ವಲಸೆ ನೀತಿ: ವಲಸೆ ಬಗ್ಗೆ ಪ್ರಶ್ನೆಗಳ ಸುರಿಮಳೆ!

ಇಸ್ಲಾಮಿಕ್ ಮೂಲಭೂತವಾದಿಗಳನ್ನು ಅಮೆರಿಕಾದಿಂದ ಹೊರಗಿಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿ ಭಾರತೀಯ-ಅಮೆರಿಕನ್ನರಿಗೂ ತಟ್ಟಿದೆ.

ನ್ಯೂಯಾರ್ಕ್: ಇಸ್ಲಾಮಿಕ್ ಮೂಲಭೂತವಾದಿಗಳನ್ನು ಅಮೆರಿಕಾದಿಂದ ಹೊರಗಿಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿ ಭಾರತೀಯ-ಅಮೆರಿಕನ್ನರಿಗೂ ತಟ್ಟಿದೆ. 
ಶಾರೂಖ್ ಖಾನ್ ಅವರ ಸ್ವದೇಶ್ ಸಿನಿಮಾಗೆ ಸ್ಪೂರ್ತಿಯಾಗಿದ್ದ ದಂಪತಿಗಳಿಗೆ ಟ್ರಂಪ್ ನ ಕಠಿಣ ವಲಸೆ ನೀತಿಯ ಬಿಸಿ ತಟ್ಟಿದ್ದು, ಅರವಿಂದ ಪಿಲ್ಲಾಲಮರಿ ದಂಪತಿಗಳನ್ನು ಪೊಲೀಸರು "ನೀವು ಅಕ್ರಮ ವಲಸಿಗರಾ? ಎಂದು ಪ್ರಶ್ನಿಸಿ ಪರಿಶೀಲನೆ ನಡೆಸಿದ್ದಾರೆ. 
ಅರವಿಂದ ಪಿಲ್ಲಾಲಮರಿ ಕಳೆದ 30 ವರ್ಷಗಳಿಂದ ಅಮೆರಿಕ ಪ್ರಜೆಗಳಾಗಿದ್ದು, ಬೆಲ್ ಏರ್ ನಲ್ಲಿ ವಾಸಿಸುತ್ತಿದ್ದಾರೆ. ಅರವಿಂದ ಪಿಲ್ಲಾಲಮರಿ ಪತ್ನಿ ಭಾರತದಲ್ಲೇ ಜನಿಸಿದವರಾಗಿದ್ದು, ಕೆಲವು ವರ್ಷಗಳ ನಂತರ ಪೋಷಕರೊಂದಿಗೆ ಅಮೆರಿಕಾಗೆ ತೆರಳಿದ್ದರು. ಅರವಿಂದ ಪಿಲ್ಲಾಲಮರಿ ಪತ್ನಿಗೆ ಅಮೆರಿಕ ಪೊಲೀಸರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅಷ್ಟೇ ಅಲ್ಲದೇ ಅವರ ಬಗ್ಗೆ ಕ್ರಿಮಿನಲ್ ತನಿಖೆ ನಡೆಯುತ್ತಿರುವುದರಿಂದ ಸ್ವತಂತ್ರವಾಗಿ ಎಲ್ಲಿಗೂ ಹೋಗುವಂತಿಲ್ಲ ಎಂದೂ ಹೇಳಿದ್ದಾರೆ. 
ನಡೆದು ಹೋಗುತ್ತಿದ್ದ ಪಿಲ್ಲಾಲಮರಿ ಪತ್ನಿಯನ್ನು ತಡೆದು ನಿಲ್ಲಿಸಿದ ಪೊಲೀಸರು "ನಿಮ್ಮ ಬಳಿ ಗುರುತಿನ ಚೀಟಿ ಏಕೆ ಇಲ್ಲ? ನೀವು ಇಲ್ಲಿ ಅಕ್ರಮವಾಗಿ ನೆಲೆಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ನಂತರ ದಾಖಲೆಗಳನ್ನು ಪರಿಶೀಲಿಸಿದಾಗ ಅವರು ಅಮೆರಿಕಾದ ಪ್ರಜೆ ಎಂಬುದು ಖಾತ್ರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರವಿಂದ ಪಿಲ್ಲಾಲಮರಿ ಪತ್ನಿ, ಸಾರ್ವಜನಿಕ ಭದ್ರತೆ ಎಂಬುದು ನಾಗರಿಕ ಹಕ್ಕಿಗೆ ಧಕ್ಕೆಯಾಗಬಾರದು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!