ಸಾಂದರ್ಭಿಕ ಚಿತ್ರ 
ದೇಶ

ಉ.ಪ್ರದೇಶದಲ್ಲಿ ಅಮಾನವೀಯ ಕೃತ್ಯ: ಭದ್ರತಾ ಸಿಬ್ಬಂದಿಯ ಕೈಬೆರಳು ಕತ್ತರಿಸಿದ ದುಷ್ಕರ್ಮಿಗಳು

ರೈಲ್ವೇ ಗೇಟ್ ತೆಗೆಯಲು ನಿರಾಕರಿಸಿದ್ದ ಭದ್ರತಾ ಸಿಬ್ಬಂದಿಯೊಬ್ಬನ ಕೈ ಬೆರಳುಗಳನ್ನು ಕತ್ತರಿಸಿರುವ ಘಟನೆಯೊಂದು ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ಸೋಮವಾರ ರಾತ್ರಿ ನಡೆದಿದೆ...

ಮೊರಾದಾಬಾದ್: ರೈಲ್ವೇ ಗೇಟ್ ತೆಗೆಯಲು ನಿರಾಕರಿಸಿದ್ದ ಭದ್ರತಾ ಸಿಬ್ಬಂದಿಯೊಬ್ಬನ ಕೈ ಬೆರಳುಗಳನ್ನು ಕತ್ತರಿಸಿರುವ ಘಟನೆಯೊಂದು ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ಸೋಮವಾರ ರಾತ್ರಿ ನಡೆದಿದೆ.

ಜೈಪ್ರಕಾಶ್ ಪಟೇಲ್ ಸಂತ್ರಸ್ತ ವ್ಯಕ್ತಿ. ಕಳೆದ ರಾತ್ರಿ ಪಟೇಲ್ ಅವರು ಭೋಜ್ಪುರ ರೈಲ್ವೆ ಗೇಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ರೈಲು ಬರುತ್ತಿರುವ ಸಂದೇಶ ಬಂದ ಹಿನ್ನಲೆಯಲ್ಲಿ ಪ್ರವೇಶ ದ್ವಾರವನ್ನು ಮುಚ್ಚಿದ್ದರು. ಈ ವೇಳೆ ಕೆಲ ಪ್ರಾಣಿಗಳೊಂದಿಗೆ ವಾಹನದಲ್ಲಿ ಗೇಟ್ ಬಳಿ ಬಂದಿರುವ ಮಾಂಸ ದಂಧೆಕೋರರು ಗೇಟ್ ತೆಗೆಯುವಂತೆ ತಿಳಿಸಿದ್ದಾರೆ.

ಸಿಗ್ನಲ್ ಇದ್ದು, ಸಿಗ್ನಲ್ ಗೂ ಮುನ್ನವೇ ಗೇಟ್ ತೆಗೆಯಲು ಸಾಧ್ಯವಿಲ್ಲ ಎಂದು ಪಟೇಲ್ ಅವರು ತಿಳಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಮಾಂಸ ದಂಧೋಕೋರರು ಚಾಕುವನ್ನು ತೆಗೆದುಕೊಂಡು ಪಟೇಲ್ ಅವರ ಕೈ ಬೆರಳುಗಳನ್ನು ಕತ್ತರಿಸಿ ರಾಕ್ಷಸ ವರ್ತನೆಯನ್ನು ಮರೆದಿದ್ದಾರೆ.

ಪ್ರಸ್ತುದ ಆರೋಪಿಗಳ ವಿರುದ್ದ ಭಾರತೀಯ ದಂಡ ಸಂಹಿತೆ ಕಲಂ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ ಹೇಳಿಕೆಗೆ ನಾನೂ ಈಗಲೂ ಬದ್ಧ, ಆದ್ರೆ ಸಿದ್ದರಾಮಯ್ಯ 5 ವರ್ಷ ಸಿಎಂ: ಯತೀಂದ್ರ

ರಾಜ್ಯದ ರೈತರಿಗೆ ವಂಚಿಸಿದವರ 'ಕೇಸ್' ಮುಚ್ಚಿಹಾಕಲು ಸಚಿವ ಜಮೀರ್ ಪ್ರಭಾವ! ಸ್ಪೋಟಕ Audio ವೈರಲ್

RJD ಬಿಹಾರವನ್ನು ಅಪಹರಣ, ಸುಲಿಗೆಯ ಕೇಂದ್ರವನ್ನಾಗಿ ಮಾಡಿದೆ: ಅಮಿತ್ ಶಾ

'4 ವರ್ಷ ಕಾದಿದ್ದೆವು.. ಆದ್ರೆ': ಪಾಕ್ ನಾಯಕಿಗೆ ಉಲ್ಟಾ ಹೊಡೆದ 6-0, ವಿಶ್ವಕಪ್ ನಿಂದ ಹೊರಬಿದ್ದ ಬೆನ್ನಲ್ಲೇ ICC ವಿರುದ್ಧ Fatima Sana ಆಕ್ರೋಶ!

ಯೋಗಿಯ ನಾಡಿನಲ್ಲಿ ಒಂದಲ್ಲ 5 ದೇವಾಲಯಗಳ ಮೇಲೆ I love Muhammad ಗೋಡೆ ಬರಹ; ಹೆಚ್ಚಿದ ಉದ್ವಿಗ್ನತೆ!

SCROLL FOR NEXT