ಅರವಿಂದ್ ಕೇಜ್ರಿವಾಲ್ 
ದೇಶ

ದ್ವೇಷ ರಾಜಕಾರಣದಿಂದ ಭಾರತವನ್ನು ರಕ್ಷಿಸಬೇಕಿದೆ: ಅರವಿಂದ್ ಕೇಜ್ರಿವಾಲ್

ಧರ್ಮ ಹಾಗೂ ಗೋವಿನ ಹೆಸರಲ್ಲಿ ಇತ್ತೀಚೆಗೆ ದೊಂಬಿ, ಹಿಂಸಾಚಾರಗಳು ನಡೆಯುತ್ತಿವೆ, ದೇಶವನ್ನು ದ್ವೇಷ ರಾಜಕಾರಣದಿಂದ ರಕ್ಷಿಸುವ ಅವಶ್ಯಕತೆ ...

ನವದೆಹಲಿ: ಧರ್ಮ ಹಾಗೂ ಗೋವಿನ ಹೆಸರಲ್ಲಿ ಇತ್ತೀಚೆಗೆ ದೊಂಬಿ, ಹಿಂಸಾಚಾರಗಳು ನಡೆಯುತ್ತಿವೆ, ದೇಶವನ್ನು ದ್ವೇಷ ರಾಜಕಾರಣದಿಂದ ರಕ್ಷಿಸುವ ಅವಶ್ಯಕತೆ ಇದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಸೂಕ್ತ ಸಿದ್ದತೆಗಳಿಲ್ಲದೇ ಜಿಎಸ್  ಟಿ ಜಾರಿಗೆ ತಂದಿರುವುಕ್ಕೆ ವಿರೋಧ ವ್ಯಕ್ತಪಡಿಸಿರುವ ಕೇಜ್ರಿವಾಲ್, ಮೂಲಭೂತ ಪರಿಕಲ್ಪನೆಯಿಲ್ಲದೇ  ಹೊಸತೆರಿಗೆ ನೀತಿ ಜಾರಿಗೆ ತಂದಿರುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಜಿಎಸ್ ಟಿಯಿಂದ ಹಣದುಬ್ಬರ ಮತ್ತಷ್ಟು ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.
ಯಾವುದೇ ಧರ್ಮ ಕೊಲ್ಲುವುದನ್ನು ಬೋಧಿಸುವುದಿಲ್ಲ, ಧರ್ಮದ ಹಾಗೂ ಗೋವಿನ ಹೆಸರಲ್ಲಿ ನಡೆಯುತ್ತಿರುವ ಕೊಲೆ ಹಾಗೂ ದೊಂಬಿಗಳ ಹಿಂದೆ ದ್ವೇಷ ರಾಜಕಾರಣ ಅಡಗಿದೆ, ಹೀಗಾಗಿ ನಮ್ಮ ದೇಶವನ್ನು ದ್ವೇಷ ರಾಜಕಾರಣದಿಂದ ರಕ್ಷಿಸುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
ಒಂದು ವೇಳೆದ್ವೇಷ ರಾಜಕಾರಣಕ್ಕೆ ಬಲಿಯಾಗಬಾರದೆಂದು ಜನರು ನಿರ್ಧರಿಸಿದರೇ ನಾಯಕರು ಸುಮ್ಮನೆ ಬಿಡುವುದಿಲ್ಲ, ಇಂಥಹ ನಿರ್ಧಾರಗಳನ್ನು ಸಹಿಸಲಾಗುವುದಿಲ್ಲ ಎಂಬ ಸಂದೇಶ ರವಾನಿಸುತ್ತಾರೆ ಎಂದು ಕೇಜ್ರಿವಾಲ್ ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

Udaipur: ನಿಜಕ್ಕೂ ಅಚ್ಚರಿ, 55ನೇ ವಯಸ್ಸಿನಲ್ಲಿ 17ನೇ ಮಗುವಿಗೆ ತಾಯಿಯಾದ ಮಹಿಳೆ!

SCROLL FOR NEXT