ಸಂಗ್ರಹ ಚಿತ್ರ 
ದೇಶ

ಆನ್ ಲೈನ್ ರೈಲ್ವೇ ಪರೀಕ್ಷೆಯಿಂದ ಬರೊಬ್ಬರಿ 4 ಲಕ್ಷ ಮರಗಳ ಕೊಡಲಿ ಪೆಟ್ಟಿಗೆ ಬಿತ್ತು ಬ್ರೇಕ್!

ಭಾರತೀಯ ರೈಲ್ವೇ ಇಲಾಖೆಯು ತನಗೆ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಡಿಜಿಟಲ್​ ಮೊರೆ ಹೋಗಿದ್ದು, ಇಲಾಖೆಯ ಈ ವಿಧಾನದಿಂದಾಗಿ ಬರೊಬ್ಬರಿ 319 ಕೋಟಿ ಕಾಗದದ ಉಳಿತಾಯವಾಗಲಿದೆ ಎಂದು ತಿಳಿದುಬಂದಿದೆ.

ನವದೆಹಲಿ: ಭಾರತೀಯ ರೈಲ್ವೇ ಇಲಾಖೆಯು ತನಗೆ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಡಿಜಿಟಲ್​ ಮೊರೆ ಹೋಗಿದ್ದು, ಇಲಾಖೆಯ ಈ ವಿಧಾನದಿಂದಾಗಿ ಬರೊಬ್ಬರಿ 319 ಕೋಟಿ ಕಾಗದದ ಉಳಿತಾಯವಾಗಲಿದೆ ಎಂದು  ತಿಳಿದುಬಂದಿದೆ.

ಭಾರತೀಯ ರೈಲ್ವೇ ಇಲಾಖೆ ಈ ಹಿಂದಿನ ಪರೀಕ್ಷಾ ವಿಧಾನಕ್ಕೆ ಬದಲಾಗಿ ಆನ್​ಲೈನ್​ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಳವಡಿಸಿಕೊಂಡಿದ್ದು, ಈ ಮೂಲಕ ಕಾಗದದ ಬಳಕೆಯೂ ಕಡಿಮೆಯಾಗಿ ಸುಮಾರು 4 ಲಕ್ಷ  ಮರಗಳಿಗೆ ಬೀಳುತ್ತಿದ್ದ ಕೊಡಲಿ ಪೆಟ್ಟಿಗೆ ಬ್ರೇಕ್ ಬೀಳಲಿದೆ. ಅಂತೆಯೇ ಇಲಾಖೆಯಲ್ಲಿನ ನೇಮಕಾತಿ ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರಕ್ಕೂ ಬ್ರೇಕ್ ಬೀಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರೈಲ್ವೇ ಇಲಾಖೆಯ ಈ ಕ್ರಮದಿಂದ  ಕಾಗದ ತಯಾರಿಗೆ ಬಳಸಲಾಗುತ್ತಿದ್ದ ಮರಗಳು ಇನ್ನು ಜೀವಂತವಾಗಿರಲಿದ್ದು, ಇದರಿಂದ 4 ಲಕ್ಷ ಮರಗಳು ಹಾಗೂ 319 ಕೋಟಿ ಪೇಪರ್ ಹಾಳೆಗಳು​ ಉಳಿಯಲಿವೆ.

ಸಾಮಾನ್ಯವಾಗಿ ರೈಲ್ವೇ ಇಲಾಖೆಯಲ್ಲಿ ಮೂರು ಹಂತಗಳಲ್ಲಿ ಪರೀಕ್ಷೆ ನಡೆಯುತ್ತದೆ. ಇದರಲ್ಲಿ ಲಿಖಿತ ಹಾಗೂ ಕೌಶಲ್ಯ ಪರೀಕ್ಷೆಗಾಗಿ ಆನ್​ಲೈನ್ ಬಳಕೆ ಮಾಡಿಕೊಂಡಿದೆ. ರೈಲ್ವೇ ಇಲಾಖೆ 351 ಕೇಂದ್ರಗಳಲ್ಲಿ 92 ಲಕ್ಷ ಅಭ್ಯರ್ಥಿಗಳು  ಪರೀಕ್ಷೆ ಬರೆದಿದ್ದರು. ಒಟ್ಟು 14 ಸಾವಿರ ಹುದ್ದೆಗಳ ಭರ್ತಿಗೆ ಈ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗಿತ್ತು. 92 ಲಕ್ಷ ಮಂದಿಯಲ್ಲಿ 2.73 ಲಕ್ಷ ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಈ ಎಲ್ಲಾ ಅಭ್ಯರ್ಥಿಗಳನ್ನು  ಆನ್​ ಲೈನ್​ ಮೂಲಕವೇ ಆಯ್ಕೆ ಮಾಡಲಾಗಿದೆ. ಕೊನೇ ಹಂತದಲ್ಲಿ 45 ಸಾವಿರ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ಜೂನ್​ 29, 30 ರಂದು ಪರೀಕ್ಷೆ ಬರೆದಿದ್ದಾರೆ ಎಂದು ರೈಲ್ವೇ ಸಚಿವಾಲಯದ ಹಿರಿಯ ಅಧಿಕಾರಿ ಮಾಹಿತಿ  ನೀಡಿದ್ದಾರೆ.

ಈ ಪ್ರಕ್ರಿಯೆಗೆ ಎರಡು ತಿಂಗಳು ಕಾಲಾವಕಾಶ ತೆಗೆದುಕೊಂಡಿದ್ದು, ಇದು ವಿಶ್ವದಲ್ಲೇ ದೊಡ್ಡ ಆನ್​ ಲೈನ್​ ಪರೀಕ್ಷೆ ಎಂಬ ಖ್ಯಾತಿಗೂ ಪಾತ್ರವಾಗಿದೆ. ಇನ್ನು ಉತ್ತರ ಪ್ರತಿಯನ್ನು ವಾರದೊಳಗೆ ಆನ್​ಲೈನ್​ನಲ್ಲಿ ನೀಡಲಾಗುವುದು ಎಂದು  ರೈಲ್ವೇ ಇಲಾಖೆ ತಿಳಿಸಿದೆ. ಸುಮಾರು 14 ಸಾವಿರ ಅಭ್ಯರ್ಥಿಗಳು ಆಯ್ಕೆಯಾಗಲಿದ್ದು, ಸೆಪ್ಟಂಬರ್​ ತಿಂಗಳಲ್ಲಿ ದಾಖಲೆಗಳ ಪರಿಶೀಲನೆಗೆ ಕರೆಯಲಾಗುವುದು. ದೀಪಾವಳಿ ನಂತರ ಆಯ್ಕೆಯಾದ ಅಭ್ಯರ್ಥಿಗಳು ಕೆಲಸಕ್ಕೆ  ಹಾಜರಾಗಲಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT