ದೇಶ

ತಂದೆಯ ಕವಿತೆ ಬಳಸಿದ್ದಕ್ಕೆ ಆಪ್ ನಾಯಕ ಕುಮಾರ್ ವಿಶ್ವಾಸ್ ವಿರುದ್ಧ ಬಚ್ಚನ್ ಗರಂ

Manjula VN
ನವದೆಹಲಿ: ನಟ ಅಮಿತಾಬ್ ಬಚ್ಚನ್ ತಮ್ಮ ತಂದೆ ಹರಿವಂಶ್ ರಾಯ್'ರ ಕವಿತೆಯ ಸಾಲುಗಳನ್ನು ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಅವರು ಬಳಸಿಕೊಂಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 
ಈ ಕುರಿತು ಅಮಿತಾಭ್, ವಿಶ್ವಾಸ್'ಗೆ ಹಕ್ಕು ಸ್ವಾಮ್ಯತೆ ಉಲ್ಲಂಘನೆಯಡಿ ನೋಟಿಸ್ ನೀಡಿದ್ದು, ಈ ಯೂಟ್ಯೂಬ್ ವಿಡಿಯೋದಿಂದ ಸಂಪಾದಿಸಿದ ಮಾಹಿತಿ ನೀಡಲು ಸೂಚಿಸಿದ್ದಾರೆ. 
ಅಮಿತಾಭ್ ಬಚ್ಚನ್ ಅವರಿಂದ ನೋಟಿಸ್ ಪಡೆದ ಬಳಿಕ ಪ್ರತಿಕ್ರಿಯೆ ನೀಡಿರುವ ಕುಮಾರ್ ವಿಶ್ವಾಸ್ ಅವರು, ವಿಡಿಯೋದಲ್ಲಿ ಕಾವ್ಯ ಬಳಕೆ ವಿರುದ್ಧ ಬಿಗ್ ಬಿ ನೋಟಿಸ್ ನೀಡಿದ್ದು, ಈ ವಿಡಿಯೋವನ್ನು ಯೂಟ್ಯೂಬ್ ನಿಂದ ಹಿಂಪಡೆದಿರುವೆ. ಇದರಿಂದ ಬಂದ ರೂ.32 ಅನ್ನು ನೀಡುತ್ತೇನೆಂದು ಹೇಳಿದ್ದಾರೆ. 
SCROLL FOR NEXT