ಸಾಂದರ್ಭಿಕ ಚಿತ್ರ 
ದೇಶ

ಕಳೆದ 7 ತಿಂಗಳಲ್ಲಿ ಜಮ್ಮು ಕಾಶ್ಮೀರದಲ್ಲಿ 102 ಉಗ್ರರ ಹತ್ಯೆ: ಹಿಟ್ ಲಿಸ್ಟ್ ನಲ್ಲಿ ಮತ್ತಷ್ಟು ಮಂದಿ

ಕಳೆದ ಜನವರಿಯಿಂದ ಜುಲೈವರೆಗೆ ಜಮ್ಮು-ಕಾಶ್ಮೀರದಲ್ಲಿ ರಕ್ಷಣಾ ಪಡೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ 102 ಮಂದಿ ಉಗ್ರರು ...

ಜಮ್ಮು: ಕಳೆದ ಜನವರಿಯಿಂದ ಜುಲೈವರೆಗೆ ಜಮ್ಮು-ಕಾಶ್ಮೀರದಲ್ಲಿ ರಕ್ಷಣಾ ಪಡೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ 102 ಮಂದಿ ಉಗ್ರರು ಹತರಾಗಿದ್ದಾರೆ ಎಂದಪ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಲಷ್ಕರ್ -ಇ -ತಯ್ಬಾ, ಜೈಶ್-ಇ -ಮೊಹಮ್ಮದ್, ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳ ಮತ್ತಷ್ಟು ಉಗ್ರರು ಹಿಟ್ ಲಿಸ್ಟ್ ನಲ್ಲಿದ್ದಾರೆ.  ದಕ್ಷಿಣ ಕಾಶ್ಮೀರದಲ್ಲಿ ಆರು ಪೊಲೀಸ್ ಅಧಿಕಾರಿಗಳ ಹತ್ಯೆಯ ಪ್ರಕರಣದಲ್ಲಿ ಭಾಗಿಯಾಗಿದ್ದ ಲಷ್ಕರ್ -ಇ- ತಯ್ಬಾ ಕಮಾಂಡರ್ ಬಶೀರ್ ಲಷ್ಕರಿ ಕೂಡ ಲಿಸ್ಟ್ ನಲ್ಲಿದ್ದಾನೆ. 
ಜುಲೈ 12 ರ ವರೆಗೂ 102 ಉಗ್ರರನ್ನು ಕೊಲ್ಲಲಾಗಿದೆ. ಕಳೆದ 7 ವರ್ಷಗಳಲ್ಲಿ ಇದು ಅತಿ ಹೆಚ್ಚಿನ ಸಂಖ್ಯೆಯಾಗಿದೆ. 2010 ರಲ್ಲಿ ಅತಿ ಹೆಚ್ಚು ಆಂದರೆ 156 ಉಗ್ರರನ್ನು ಹತ್ಯೆ ಮಾಡಲಾಗಿತ್ತು. 
ಕಳೆದ ವರ್ಷ 22 ಉಗ್ರರು ಸಾವನ್ನಪ್ಪಿದ್ದರು, 2015 ಮತ್ತು 2014 ರಲ್ಲಿ  51 ಉಗ್ರರು,  2013 ರಲ್ಲಿ 43, 2012 ರಲ್ಲಿ 37, 2011 ರಲ್ಲಿ 61 ಉಗ್ರರನ್ನು ಕೊಲ್ಲಲಾಗಿದೆ ಎಂದು ಪೊಲೀಸ್ ಅಧಿಕಾರಿಗಳ ಮಾಹಿತಿಯಿಂದ ತಿಳಿದು ಬಂದಿದೆ.
ವಿವಿಧ ಸ್ಥಳಗಳಲ್ಲಿ ನಡೆದ ಕಾರ್ಯಾಚರಣೆ ತಂತ್ರದಿಂದ ಉಗ್ರರನ್ನು ಕೊಲ್ಲಲಾಗಿದೆ. ಆದರೆ ಉಗ್ರರು ತಮ್ಮ ಪ್ರಾಬಲ್ಯವನ್ನು ಮುಂದುವರಿಸಲು ಪ್ರತಿಯಾಗಿ ದಾಳಿ ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿವೈಎಸ್ ಪಿ ಸೇರಿದಂತೆ 7 ಮಂದಿ ಪೊಲೀಸರನ್ನು ಹತ್ಯೆಗೈದ ಪ್ರಕರಣದಲ್ಲಿ  ಭಾಗಿಯಾಗಿದ್ದ ಉಗ್ರರನ್ನು ಪೊಲೀಸರು ಈಗಾಗಲೇ ಕೊಂದಿದ್ದಾರೆ.  ಅಮರನಾಥ್ ಯಾತ್ರಿಗಳ ಮೇಲೆ ನಡೆದ ದಾಳಿ ಪ್ರಕರಣದ ಮಾಸ್ಟರ್ ಮೈಂಡ್ ಎಲ್ ಇಟಿ ಕಮಾಂಡರ್ ಅಬು ಇಸ್ಮಾಯಿಲ್  ಗಾಗಿ ಸಾಮೂಹಿಕ ಶೋದ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಎಲ್ ಇಟಿ ವಿಭಾಗಿಯ ಕಮಾಂಡರ್  ಅಬು ದೌಜನ್ ಅಲಿಯಾಸ್ ಹಫೀಜ್ ಬಶೀರ್ ವನಿ, ಶೌಕತ್ ತಕ್ ಅಲಿಯಾಸ್ ಹುಜೈಫಾ ಸೇರಿದಂತೆ ಹಲವರು ಹಿಟ್ ಲಿಸ್ಟ್ ನಲ್ಲಿದ್ದಾರೆ. 
ಪಾಕಿಸ್ತಾನಿ ಪೌರ ಹಾಗೂ ಜೈಶ್-ಇ ಮೊಹಮದ್ ಸಂಘಟನೆಯ ವಿಭಾಗೀಯ ಕಮಾಂಡರ್ ಅಬು ಹಮಾಸ್ ಕೂಡ ಹಿಟ್ ಲಿಸ್ಟ್ ನಲ್ಲಿದ್ದಾನೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT