ಮಹಿಳೆ ಥಳಿಸುತ್ತಿರುವ ಮೈದುನ ಮತ್ತು ಆತನ ಸ್ನೇಹಿತರು 
ದೇಶ

ಅಮಾನುಷ: ಹೆಣ್ಣು ಮಗುವಿಗೆ ಜನ್ಮ ನೀಡಿದಳೆಂದು ಮನಸೋ ಇಚ್ಛೆ ಥಳಿತ!

ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂಬ ಒಂದೇ ಕಾರಣದಿಂದಾಗಿ ಮಹಿಳೆಯೊಬ್ಬಳನ್ನು ಮನೆಯವರೇ ಮನಸೋ ಇಚ್ಛೆ ಥಳಿಸಿರುವ ಘಟನೆ ಪಂಜಾಬ್ ಪಾಟಿಯಾಲದಲ್ಲಿ ನಡೆದಿದೆ.

ಪಾಟಿಯಾಲ: ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂಬ ಒಂದೇ ಕಾರಣದಿಂದಾಗಿ ಮಹಿಳೆಯೊಬ್ಬಳನ್ನು ಮನೆಯವರೇ ಮನಸೋ ಇಚ್ಛೆ ಥಳಿಸಿರುವ ಘಟನೆ ಪಂಜಾಬ್ ಪಾಟಿಯಾಲದಲ್ಲಿ ನಡೆದಿದೆ.

ಪಾಟಿಯಾಲ ನಿವಾಸಿ ಮೀನಾ ಕಶ್ಯಪ್ ಎಂಬುವವರು ಹಲ್ಲೆಗೊಳಗಾದ ಮಹಿಳೆಯಾಗಿದ್ದು, ವರ್ಷಗಳ ಹಿಂದಷ್ಟೇ ಮೀನಾ ದಲ್ಜೀತ್ ಸಿಂಗ್ ಎಂಬುವವರನ್ನು ವಿವಾವವಾಗಿದ್ದರು. ಇತ್ತೀಚೆದೆ ಮೀನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.  ಆದರೆ ಹೆಣ್ಣು ಮಗು ಜನಿಸುವುದು ಇಷ್ಟವಿರದ ಮನೆ ಸಿಬ್ಬಂದಿ ವರದಕ್ಷಿಣೆ ನೆಪವೊಡ್ಡಿ ಮಹಿಳೆ ಮನಸೋ ಇಚ್ಛೆ ಥಳಿಸಿದ್ದಾರೆ. ಗಂಡನ ಸಹೋದರರು ಹಾಗೂ ಆವರ ಸ್ನೇಹಿತರು ಮಹಿಳೆಗೆ ಥಳಿಸಿದ್ದು, ನೆರೆಮನೆಯೊಬ್ಬರು ಈ ಥಳಿತ  ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ದಾಖಲಿಸಿ ಸಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.

ಹೆಣ್ಣು ಮಗು ಜನಿಸಿದ ಬಳಿಕ ಆಕೆಯನ್ನು ಕುಟುಂಬದೊಳಗೆ ಸೇರಿಸಿಕೊಳ್ಳಲು ಕುಟುಂಬ ನಿರಾಕರಿಸಿದ್ದರಿಂದ ಆಕೆ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದಳು. ಅದಾಗ್ಯೂ ಆಕೆಯನ್ನು ಬಿಡದ ಗಂಡನ ಸಹೊದರರು ವರದಕ್ಷಿಣೆಗಾಗಿ ನಿತ್ಯ  ಕಿರುಕುಳು ನೀಡುತ್ತಿದ್ದರು ಎಂದು ತಿಳಿದುಬಂದಿದೆ. ನಿನ್ನೆ ಏಕಾಏಕಿ ಮೀನಾ ಅವರ ನಿವಾಸಕ್ಕೆ ಆಗಮಿಸಿದ ಆಕೆಯ ಮೈದುನ ಹಾಗೂ ಆತನ ಸ್ನೇಹಿತರು ಹಾಕಿ ಬ್ಯಾಟ್ ಮತ್ತು ಇತರೆ ದೊಣ್ಣೆಗಳಿಂದ ಆಕೆಯನ್ನು ಮನಸೋ ಇಚ್ಛೆ  ಥಳಿಸಿದ್ದಾರೆ.

ಈ ವಿಡಿಯೋ ಇದೇಗ ವೈರಲ್ ಆಗಿದ್ದು, ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬರುತ್ತಿದೆ. ಅಂತೆಯೇ ಮಾಧ್ಯಮಗಳಲ್ಲೂ ಈ ವಿಡಿಯೋ ಪ್ರಸಾರವಾಗಿದ್ದು, ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರವಾದ ಬೆನ್ನಲ್ಲೇ ಪೊಲೀಸರು ದೂರು  ದಾಖಲಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಸಂತ್ರಸ್ತ ಮಹಿಳೆಯ ತಂದೆ ಹೇಳಿಕೆ ನೀಡಿದ್ದು, ಮೀನಾಳ ಗಂಡ ಹಾಗೂ ಆಕೆಯ ಮೈದುನ ವರದಕ್ಷಿಣೆ ಹಣಕ್ಕಾಗಿ ನಿತ್ಯ ಕಿರುಕುಳ  ನೀಡುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT