ದೇಶ

ಅಧಿಕಾರಕ್ಕಾಗಿ ಬಿಜೆಪಿಯಿಂದ ಜನರಿಗೆ 'ಸುಳ್ಳು' ಮಾರಾಟ : ರಾಹುಲ್ ಗಾಂಧಿ

Shilpa D
ರಾಯ್ ಪುರ:  ಅಧಿಕಾರದ ದುರಾಸೆಯಿಂದ ಬಿಜೆಪಿ ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸುತ್ತಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಛತ್ತೀಸ್ ಗಡದಲ್ಲಿ ನಡೆದ ಪಕ್ಷದ 138ನೇ ಕೇಡರ್ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ನಿಮಗೆ ಆ ಸಾಮರ್ಥ್ಯವಿದೆ ಮತ್ತು ನೀವು ಅದನ್ನು ಮಾಡುತ್ತೀರಿ, ಬಿಜೆಪಿ ಅಧಿಕಾರಕ್ಕಾರಿ ಜನರಿಗೆ ಸುಳ್ಳನ್ನು ಮಾರಾಟ ಮಾಡುತ್ತಿದೆ. ಎಲ್ಲೆಡೆ ಅಧಿಕಾರ ಸ್ಥಾಪಿಸುವ ಉದ್ದೇಶದಿಂದ ಈ ರೀತಿ ಮಾಡುತ್ತಿದೆ. ಆದರೆ ಕೊನೆಗೆ ಸತ್ಯವೊಂದೆ ಉಳಿಯುವುದು ಹಾಗೂ ಗೆಲ್ಲುವುದು  ಎಂದು ರಾಹುಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಬಿಜೆಪಿ ಮತ್ತು ಆರ್ ಎಸ್ ಎಸ್ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಈ ವಿಷಯವನ್ನು ಕಾಂಗ್ರೆಸ್ ನವರು ಫೋಕಸ್ ಮಾಡಿ ಜನರ ಅರಿವಿಗೆ ತರಬೇಕು ಎಂದು ಕರೆ ನೀಡಿದ್ದಾರೆ.
ರಾಹುಲ್ ಗಾಂಧಿ ಬಸ್ತಾರ್ಗೆ ಎರಡು ದಿನಗಳ ಭೇಟಿ ನೀಡಿದ್ದಾರೆ. ಶನಿವಾರ ಇಲ್ಲಿನ ಆದಿವಾಸಿ ಜನಾಂಗವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಆದಿವಾಸಿ ಜನಾಂಗದ ವಿದ್ಯಾರ್ಥಿಗಳೊಂದಿಗೂ ರಾಹುಲ್ ಚರ್ಚಿಸಲಿದ್ದಾರೆ. ಛತ್ತೀಸ್ ಗಡ ವಿಧಾನ ಸಭೆಯ 90 ಸೀಟುಗಳಲ್ಲಿ ಬಸ್ತಾರ್ 12 ಸೀಟುಗಳನ್ನು ಹೊಂದಿದೆ.
SCROLL FOR NEXT