ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಬಲ ಚಿತ್ರದಲ್ಲಿ 4 ತಿಂಗಳ ಮಗು ರೋಹನ್ 
ದೇಶ

ಸುಷ್ಮಾ ಸ್ವರಾಜ್ ಸಹಾಯ: ಹೃದಯ ಚಿಕಿತ್ಸೆಗೆ 4 ತಿಂಗಳ ಮಗು ಪಾಕಿಸ್ತಾನದಿಂದ ದೆಹಲಿಗೆ ಆಗಮನ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಭರವಸೆ ಮೇರೆಗೆ ನಾಲ್ಕು ತಿಂಗಳ ಮಗು ರೊಹಾನ್ ಗೆ ಚಿಕಿತ್ಸೆ...

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಭರವಸೆ ಮೇರೆಗೆ ನಾಲ್ಕು ತಿಂಗಳ ಮಗು ರೊಹಾನ್ ಗೆ ಚಿಕಿತ್ಸೆ ಕೊಡಿಸಲು ಆತನ ಪೋಷಕರು ಪಾಕಿಸ್ತಾನದಿಂದ ನಿನ್ನೆ ನೊಯ್ಡಾಗೆ ಆಗಮಿಸಿದರು. ರೊಹಾನ್  ಗೆ ದೆಹಲಿಯ ಜೇಪೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹೃದಯದಲ್ಲಿ ರಂಧ್ರ ಹೊಂದಿರುವ ರೊಹಾನ್  ಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕೆಂದು ವೈದ್ಯರು ಸಲಹೆ ನೀಡಿದ್ದರು. ದೆಹಲಿಯಲ್ಲಿ ಚಿಕಿತ್ಸೆ ನೀಡುವುದು ಉತ್ತಮ ಎಂದು ಕೂಡ ಹೇಳಲಾಗಿತ್ತು. ಆದರೆ ಭಾರತ-ಪಾಕಿಸ್ತಾನ ನಡುವೆ ಗಡಿ ಭಾಗದಲ್ಲಿನ ಉದ್ವಿಗ್ನ ವಾತಾವರಣದಿಂದಾಗಿ  ರೊಹಾನ್ ನ ಪೋಷಕರಿಗೆ ವೈದ್ಯಕೀಯ ವೀಸಾ ಸಿಕ್ಕಿರಲಿಲ್ಲ.
ಇದರಿಂದ ರೊಹಾನ್ ನ ತಂದೆ ಕನ್ವಲ್ ಸಾದಿಕ್ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸಂಪರ್ಕಿಸಿ ವೈದ್ಯಕೀಯ ವೀಸಾ ಕೊಡಿಸುವಂತೆ ಮನವಿ ಮಾಡಿದರು. ಮನವಿ ಬಂದ ತಕ್ಷಣ ಪರಿಶೀಲಿಸಿದ ಸಚಿವೆ ಸುಷ್ಮಾ ಸ್ವರಾಜ್ ರೋಹನ್ ನ ಕುಟುಂಬಕ್ಕೆ ವೈದ್ಯಕೀಯ ವೀಸಾ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. 
ಇದೀಗ ರೊಹಾನ್ ನನ್ನು ಕರೆದುಕೊಂಡು ಆತನ ಪೋಷಕರು ವಾಘಾ ಗಡಿ ದಾಟಿ ಭಾರತಕ್ಕೆ ಬಂದಿದ್ದಾರೆ.
ಜೇಪೀ ಆಸ್ಪತ್ರೆಗೆ ತಲುಪಿರುವ ರೊಹಾನ್  ಪೋಷಕರು ಮಾಧ್ಯಮಗಳೊಂದಿಗೆ ಮಾತನಾಡಿ, ಪಾಕಿಸ್ತಾನದಲ್ಲಿ ತಾವು ತಮ್ಮ ಮಗುವಿನ ಆರೋಗ್ಯ ತಪಾಸಣೆ ಮಾಡಿಸಿದಾಗ ಹೃದಯದಲ್ಲಿ ಒಂದು ರಂಧ್ರವಿರುವುದಲ್ಲದೆ ಹೃದಯದ ನರಗಳಲ್ಲಿ ಸಹ ತೊಂದರೆಯಿದೆ ಎಂದು ವೈದ್ಯರು ಹೇಳಿದರು. ಅದಕ್ಕೆ ಪಾಕಿಸ್ತಾನದಲ್ಲಿ ಚಿಕಿತ್ಸೆ ದೊರಕುವುದಿಲ್ಲ. ದೆಹಲಿಯ ಜೇಪೀ ಆಸ್ಪತ್ರೆಯನ್ನು ವೈದ್ಯರು ಉಲ್ಲೇಖಿಸಿದರು ಎನ್ನುತ್ತಾರೆ. ಮಗುವಿಗೆ ಇದೇ 15ರಂದು ಚಿಕಿತ್ಸೆಗೊಳಪಡಿಸುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT