ದೇಶ

ಜನರ ನಂಬಿಕೆಯನ್ನು ಕಳೆದುಕೊಳ್ಳಬೇಡಿ: ಸೇನಾ ಪಡೆಗೆ ಮುಖ್ಯಸ್ಥರ ಸಲಹೆ

Srinivas Rao BV
ಹೈದರಾಬಾದ್: ಭಾರತೀಯ ಸೇನೆ ಬಗ್ಗೆ ಜನರಿಗೆ ಇರುವ ನಂಬಿಕೆ ವಿಶ್ವಾಸಗಳನ್ನು ಕಳೆದುಕೊಳ್ಳದಂತೆ ಭಾರತೀಯ ಸೇನೆಯ ಮುಖ್ಯಸ್ಥರು ಸಿಬ್ಬಂದಿಗಳಿಗೆ ಸಲಹೆ ನೀಡಿದ್ದಾರೆ. 
ಸಮಗ್ರತೆ ಸೇನಾ ವೃತ್ತಿಗೆ ಅಡಿಪಾಯವಾಗಿದೆ. ಸೇನೆಯ ಸಮಗ್ರತೆ ಬಗ್ಗೆ ಪ್ರಶ್ನೆಗಳು ಉದ್ಭವಿಸಿದರೆ ನಾವು ನಮ್ಮ ಸಮಾಜದ ವಿಶ್ವಾಸವನ್ನೇ ಕಳೆದುಕೊಂಡಂತಾಗುತ್ತದೆ. ಸೇನಾ ಪಡೆಯನ್ನು ಸಮಾಜ ನಂಬದೇ ಹೋದರೆ ದೇಶಕ್ಕೆ ತನ್ನ ಸೇನೆ ಹಾಗೂ ತನ್ನನ್ನು ಕಾಪಾಡಿಕೊಳ್ಳುವುದು ಕಷ್ಟಸಾಧ್ಯವಾಗಲಿದೆ, ಆದ್ದರಿಂದ ಸಮಗ್ರತೆಯ ಮಾನದಂಡಗಳನ್ನು ಕಾಯ್ದುಕೊಳ್ಳಬೇಕೆಂದು ಭಾರತೀಯ ಸೇನಾ ಮುಖ್ಯಸ್ಥರು ಕರೆ ನೀಡಿದ್ದಾರೆ. 
ಕಂಬೈನ್ಡ್ ಗಾರ್ಡಿಯನ್ ಪರೇಡ್ ನ್ನು ಉದ್ದೇಶಿಸಿ ಮಾತನಾಡಿರುವ ಭಾರತೀಯ ಸೇನೆಯ ಮುಖ್ಯಸ್ಥರು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹೊರಗಿನ ಶತ್ರುಗಳ ಬಗ್ಗೆ ಸಿಬ್ಬಂದಿಗಳು ಎಚ್ಚರದಿಂದ ಇರಬೇಕು ಎಂದು ಹೇಳಿದ್ದಾರೆ. 
SCROLL FOR NEXT