ಚತ್ತೀಸ್ ಗಢ: ಗಾಯಗೊಂಡ ಯೋಧರಿಗಾಗಿ ನಿಯೋಜಿಸಲಾಗಿದ್ದ ಐಎಎಫ್ ಹೆಲಿಕಾಫ್ಟರ್ ನ ಮೇಲೆ ನಕ್ಸಲರು ದಾಳಿ ನಡೆಸಿದ್ದಾರೆ.
ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿರುವ ದಾಳಿಯಲ್ಲಿ ಇಬ್ಬರು ಭದ್ರತಾ ಪಡೆಯ ಸಿಬ್ಬಂದಿಗಳು ಮೃತಪಟ್ಟಿದ್ದು, 3 ಯೋಧರು ಗಾಯಗೊಂಡಿದ್ದಾರೆ. ಚತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ವಿರುದ್ಧ ಭದ್ರತಾ ಸಿಬ್ಬಂದಿಗಳು ಆಪರೇಷನ್ ಪ್ರಹಾರ್ ಎಂಬ ಕಾರ್ಯಾಚರಣೆ ನಡೆಸಿದ್ದರು.
ಸಿಬ್ಬಂದಿಗಳನ್ನು ಸಾಗಿಸಲು ಭಾರತೀಯ ವಾಯುಪಡೆಯ ನಕ್ಸಲ್ ನಿಗ್ರಹ ಪಡೆಸಹ ಕಾರ್ಯಾಚರಣೆಗಿಳಿದಿದೆ. ಈ ವೇಳೆ ಗಾಯಗೊಂಡ ಯೋಧರಿಗಾಗಿ ನಿಯೋಜನೆ ಮಾಡಲಾಗಿದ್ದ ಐಎಎಫ್ ಹೆಲಿಕಾಫ್ಟರ್ ನ ಮೇಲೆ ನಕ್ಸಲರು ದಾಳಿ ನಡೆಸಿದ್ದಾರೆ.
ಭದ್ರತಾ ಪಡೆಗಳು-ನಕ್ಸಲರ ನಡುವೆ ಗುಂಡಿನ ಕಾರ್ಯಾಚರಣೆ ನಡೆದು ಹೆಚ್ಚಿನ ಹಾನಿ ಸಂಭವಿಸಿದರ ಬಗ್ಗೆ ಮಾಹಿತಿ ಪಡೆದ ಐಎಎಫ್ ನ ಟಾಸ್ಕ್ ಫೋರ್ಸ್ ಕಮಾಂಡರ್ ಹೆಲಿಕಾಫ್ಟರ್ ಗಳನ್ನು ನಿಯೋಜನೆ ಮಾಡಲು ನಿರ್ಧರಿಸಿದರು. ದಟ್ಟ ಕಾಡಿನ ನಡುವೆ ನಕ್ಸಲ್ ಪೀಡಿತ ಪ್ರದೇಶವಿದ್ದು, ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶವನ್ನು ಹೆಚ್ಚಿನ ಅಪಾಯವಿರುವ ಪ್ರದೇಶವನ್ನಾಗಿ ಘೋಷಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos