ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಗಾಯತ್ರಿ ಪ್ರಜಾಪತಿಯವರನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಅವರು ಭೇಟಿಯಾಗಿರುವುದಕ್ಕೆ ಬಿಜೆಪಿ ಬುಧವಾರ ತೀವ್ರವಾಗಿ ಕಿಡಿಕಾರಿದೆ.
ಮುಲಾಯಂ ಹಾಗೂ ಪ್ರಜಾಪತಿ ಭೇಟಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಸುಧಾಂಶು ತ್ರಿವೇದಿಯವರು, ಒಬ್ಬ ಅತ್ಯಾಚಾರಿ ಆರೋಪಿ ಕುರಿತಂತೆ ಹಿರಿಯ ನಾಯಕರೊಬ್ಬರು ಈ ರೀತಿಯಾಗಿ ಹೇಳಿದೆ ನೀಡುತ್ತಿರುವುದು ದುರಾದೃಷ್ಟಕರ. ಕ್ರಿಮಿನಲ್ ಗಳನ್ನು ಮುಲಾಯಂ ಅವರು ಭೇಟಿಯಾಗುತ್ತಿರುವುದು ಹೊಸದೇನಲ್ಲ ಎಂದು ಹೇಳಿದ್ದಾರೆ.
ಪ್ರಜಾಪತಿಯವರಿಗೆ ಮುಲಾಯಂ ಅವರು ಬೆಂಬಲ ನೀಡುತ್ತಿರುವುದು ನಿಜಕ್ಕೂ ಖಂಡನೀಯ. ಒಮ್ಮೆ ಮುಲಾಯಂ ಅವರು ನೀಡಿದ್ದ ಹೇಳಿಕೆಯನ್ನು ಇಲ್ಲಿ ನಾವು ಸ್ಮರಿಸಬಹುದು. ಹುಡುಕರು ತಪ್ಪುಗಳನ್ನು ಮಾಡುತ್ತಾರೆಂದು ಹೇಳಿದ್ದರು. ಸಮಾಜವಾದಿ ಪಕ್ಷ ಕ್ರಿಮಿನಲ್ ಗಳಿಗೆ, ಭ್ರಷ್ಟ ಅಧಿಕಾರಿಗಳಿಗೆ ಹಾಗೂ ಸಮಾಜಘಾತುಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತದೆ ಎಂಬುದು ಹೊಸದೇನಲ್ಲ ಎಂದು ತಿಳಿಸಿದ್ದಾರೆ.