ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ 
ದೇಶ

ಕಾಬೂಲ್ ಸ್ಫೋಟ: ರಾಸಾಯನಿಕ ದಾಳಿ ಶಂಕೆ ವ್ಯಕ್ತಪಡಿಸಿದ ಪರಿಕ್ಕರ್

ಕಾಬುಲ್ ಸ್ಫೋಟವೊಂದು ರಾಸಾಯನಿಕ ದಾಳಿಯಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಯಾವುದೇ ದಾಳಿ ಸಂಭವಿಸಿದರು ದಾಳಿ ಎದುರಿಸಲು ಭಾರತ ಸನ್ನದ್ಧವಾಗಿರಬೇಕೆಂದು ಗುರುವಾರ...

ನವದೆಹಲಿ: ಕಾಬುಲ್ ಸ್ಫೋಟವೊಂದು ರಾಸಾಯನಿಕ ದಾಳಿಯಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಯಾವುದೇ ದಾಳಿ ಸಂಭವಿಸಿದರು ದಾಳಿ ಎದುರಿಸಲು ಭಾರತ ಸನ್ನದ್ಧವಾಗಿರಬೇಕೆಂದು ಗುರುವಾರ ಹೇಳಿದ್ದಾರೆ. 
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್'ಡಿಒ) ಉದ್ದೇಶಿಸಿ ಮಾತನಾಡಿರುವ ಅವರು, ಆಫ್ಘಾನಿಸ್ತಾನದ ದಕ್ಷಿಣ ಮತ್ತು ಉತ್ತರದ ಭಾಗಗಳಿಂದ ಕೇಳಿ ಬರುತ್ತಿರುವ ವರದಿಗಳನ್ನು ಗಮನಿಸಿದರೆ, ಹಾಗೂ ಸ್ಪೋಟದಿಂದ ಸ್ಥಳೀಯರ ನೋವಿನ ಫೋಟೋಗಳನ್ನು ನೋಡಿದರೆ, ಸ್ಫೋಟವೊಂದು ರಾಸಾಯನಿಕ ದಾಳಿಯಿರಬಹುದೆಂಬ ಶಂಕೆಗಳು ಮೂಡತೊಡಗಿವೆ. ಪ್ರಸ್ತುತ ಈ ಬಗ್ಗೆ ನನ್ನ ಬಳಿ ಯಾವುದೇ ದೃಢೀಕರಣಗಳಿಲ್ಲ. ಆದರೆ, ಫೋಟೋಗಳನ್ನು ನೋಡಿದರೆ ಬಹಳ ನೋವಾಗುತ್ತದೆ ಎಂದು ಹೇಳಿದ್ದಾರೆ. 
ಈ ವರೆಗೂ ನಾವು ಪರಮಾಣು ಅಥವಾ ರಾಸಾಯನಿಕದಂತಹ ಯಾವುದೇ ದಾಳಿಗಳನ್ನು ಎದುರಿಸಿಲ್ಲ. ಕಾಬೂಲ್ ಸ್ಫೋಟವನ್ನು ಗಮನಿಸಿದರೆ, ಈ ರೀತಿಯ ದಾಳಿಗಳು ಸಂಭವಿಸಿದರೆ, ಇಂತಹ ದಾಳಿಗಳನ್ನು ಎದುರಿಸಲು ಸನ್ನದ್ಧರಾಗಿರಬೇಕಿದೆ. ಇಂತಹ ದುರಂತಗಳನ್ನು ಎದುರಿಸಲು ಭಾರತೀಯ ಸೇನೆ ಸದಾ ಸಿದ್ಧರಾಗಿರಬೇಕಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT