ದೇಶ

ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ವಿರುದ್ಧ ವಾರೆಂಟ್ ಜಾರಿ

Vishwanath S
ಕೋಲ್ಕತ್ತಾ: ಖಾಸಗಿ ಟಿವಿ  ಚಾನಲ್ ಕಾರ್ಯಕ್ರಮವೊಂದರಲ್ಲಿ ಟಿಎಂಸಿ ಶಾಸಕಿ ಮೊಹಿತ್ರಾ ಅವರನ್ನು ತಂಪುಪಾನೀಯಾಗೆ ಹೋಲಿಸಿ ವ್ಯಂಗ್ಯವಾಡಿದ್ದ ಕೇಂದ್ರ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಖಾತೆ ರಾಜ್ಯ ಸಚಿವ ಬಾಬುಲ್ ಸುಪ್ರಿಯೋ ವಿರುದ್ಧ ಕೋರ್ಟ್ ವಾರೆಂಟ್ ಜಾರಿ ಮಾಡಿದೆ. 
ಪಶ್ಚಿಮ ಬಂಗಾಳದ ಕರೀಂಪುರದ ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ)ದ ಶಾಸಕಿ ಮಹುವಾ ಮೊಹಿತ್ರಾ ಅವರು ಅಲಿಪೋರಾದ ಕೋರ್ಟ್ ನಲ್ಲಿ 2017ರ ಜನವರಿ 4ರಂದು ದೂರು ನೀಡಿದ್ದರು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಬಾಬುಲ್ ಸುಪ್ರಿಯೋಗೆ ಮೂರು ಬಾರಿ ಸಮನ್ಸ್ ಜಾರಿ ಮಾಡಿತ್ತು. ಸತತ ಮೂರು ಬಾರಿಯೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್ ಸುಪ್ರಿಯೋ ವಿರುದ್ಧ ವಾರೆಂಟ್ ಜಾರಿ ಮಾಡಿದೆ. 
ಮಹುವಾ ಮೊಹಿತ್ರಾ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಪ್ತೆಯಾಗಿದ್ದು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಮೊಹಿತ್ರಾ ಅವರು ಕೋರ್ಟ್ ಮೆಟ್ಟಿಲೇರಿದ್ದರು. 
SCROLL FOR NEXT