ಸಂಗ್ರಹ ಚಿತ್ರ 
ದೇಶ

16 ವರ್ಷಗಳ ಹೋರಾಟದ ಬಳಿಕವೂ ಇರೋಮ್ ಶರ್ಮಿಳಾಗೆ ಬಿದ್ದಿದ್ದು ಕೇವಲ 90 ಮತ!

ಮಣಿಪುರದ ತೌಬಾಲ್ ಕ್ಷೇತ್ರದಿಂದ ಸ್ಪರ್ಧಿಸಿ ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಸಿಂಗ್ ವಿರುದ್ಧ ಭಾರಿ ಅಂತರದಿಂದ ಪರಾಭವಗೊಂಡಿದ್ದ ಪಿಆರ್‌ಜೆಎ ಪಕ್ಷದ ಸಂಸ್ಥಾಪಕಿ ಇರೋಮ್ ಶರ್ಮಿಳಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ಇಂಫಾಲ: ಮಣಿಪುರದ ತೌಬಾಲ್ ಕ್ಷೇತ್ರದಿಂದ ಸ್ಪರ್ಧಿಸಿ ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಸಿಂಗ್ ವಿರುದ್ಧ ಭಾರಿ ಅಂತರದಿಂದ ಪರಾಭವಗೊಂಡಿದ್ದ ಪಿಆರ್‌ಜೆಎ ಪಕ್ಷದ ಸಂಸ್ಥಾಪಕಿ ಇರೋಮ್ ಶರ್ಮಿಳಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ಮಣಿಪುರದಲ್ಲಿನ ಸೇನಾ ದೌರ್ಜನ್ಯದ ವಿರುದ್ಧ ಸತತ 16 ವರ್ಷಗಳಿಂದ ಹೋರಾಡಿ, ತಮ್ಮ ಸತ್ಯಾಗ್ರಹದಿಂದಲೇ ಖ್ಯಾತಿ ಪಡೆದಿದ್ದ ಇರೋಮ್ ಶರ್ಮಿಳಾ ಚುನಾವಣೆಯಲ್ಲಿ ಗಳಿಸಿದ್ದ ಕೇವಲ 90 ಮತಗಳು ಮಾತ್ರ. ತೌಬಾಲ್  ಕ್ಷೇತ್ರದಿಂದ ಸ್ಪರ್ಧಿಸಿದ್ದ ಇರೋಮ್ ವಿರುದ್ಧ ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಸಿಂಗ್ ಭಾರಿ ಪ್ರಮಾಣದ ಮತಗಳ ಅಂತರದಿಂದ ಗೆದ್ದಿದ್ದು, ಇದರಿಂದ ಮನನೊಂದಿರುವ ಇರೋಮ್ ಶರ್ಮಿಳಾ ರಾಜಕೀಯದಿಂದಲೇ ದೂರ  ಸರಿಯುವ ನಿರ್ಧಾರ ಮಾಡಿದ್ದಾರೆ.

"ಚುನಾವಣೆ ಸೋಲಿನಿಂದ ನನಗೆ ಮುಜುಗರವಾಗಿಲ್ಲ. ಆದರೆ, ಚುನಾವಣೆಗಳಿಂದ ನಾನು ಬೇಸತ್ತಿದ್ದೇನೆ. ಭವಿಷ್ಯದಲ್ಲಿ ನಾನು ಚುನಾವಣೆಗಳಲ್ಲಿ ಸ್ಪರ್ಧೆ ಮಾಡುವುದಿಲ್ಲ. ಆದರೆ, ನಾನು ಸ್ಥಾಪನೆ ಮಾಡಿದ್ದ ಪಿಆರ್‌ಜೆಎ ಪಕ್ಷ  ಬದುಕುಳಿಯಬೇಕು. ನಾನು ಪ್ರಚಾರಕ್ಕೆ ತೆರಳಿದ್ದ ವೇಳೆ ಪ್ರತಿಯೊಬ್ಬರೂ ನನ್ನ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಗೆಲ್ಲಿಸುವುದಾಗಿ ಹೇಳಿದ್ದರು. ಆದರೆ, ಮತದಾನದ ದಿನ ತಮ್ಮ ಸ್ವಾರ್ಥಕ್ಕಾಗಿ ಇತರ ಅಭ್ಯರ್ಥಿಗೆ ಮತ  ಚಲಾಯಿಸಿದ್ದಾರೆ ಎಂದು ಇರೋಮ್ ಶರ್ಮಿಳಾ ಅವರು ಮತದಾರರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: EY ವರದಿ

Ganesh Chaturthi ಎಫೆಕ್ಟ್; ಮತ್ತೆ ಗಗನದತ್ತ ಮುಖ ಮಾಡಿದ ಚಿನ್ನದ ಬೆಲೆ, ಇಂದಿನ ದರ ಪಟ್ಟಿ ಇಂತಿದೆ!

ಕೊಹಿಮಾ, ವಿಶಾಖಪಟ್ಟಣಂ, ಭುವನೇಶ್ವರ ಮಹಿಳೆಯರಿಗೆ ಸುರಕ್ಷಿತ ನಗರ; ಪಾಟ್ನಾ, ಜೈಪುರ ಅಸುರಕ್ಷಿತ!

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಹಠಾತ್ ಪ್ರವಾಹ: ಭೂಕುಸಿತದಿಂದ ನಾಲ್ವರು ಸಾವು

SCROLL FOR NEXT