ದೇಶ

ಯೋಗಿ ಆದಿತ್ಯನಾಥ್ ಪೂರ್ವಾಶ್ರಮದ ಕುಟುಂಬದಲ್ಲಿ ಮನೆಮಾಡಿದ ಸಂತಸ

Sumana Upadhyaya
ಪಂಚೂರ್(ಉತ್ತರಾಖಂಡ): ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸುತ್ತಿರುವುದಕ್ಕೆ ಅವರ ಪೂರ್ವಾಶ್ರಮದ ತಂದೆ ಹಾಗೂ ಕುಟುಂಬದವರು ಸಂತೋಷಗೊಂಡಿದ್ದಾರೆ.
''ಬಾಲ್ಯದಿಂದಲೂ ಅವರಿಗೆ ಉನ್ನತವಾದ ಉದ್ದೇಶ, ಗುರಿಯಿತ್ತು. ಜನರ ಸೇವೆ ಮಾಡಬೇಕೆಂಬ ಆಕಾಂಕ್ಷೆಯಿತ್ತು. ಇಂದು ಮುಖ್ಯಮಂತ್ರಿಯಾಗಿದ್ದಾರೆ. ನನಗೆ ಈ ಸಂದರ್ಭದಲ್ಲಿ ಸಂತೋಷ ಮತ್ತು ಹೆಮ್ಮೆಯಾಗುತ್ತಿದೆ. ಇದುವರೆಗೆ ಅವರು ತೆಗೆದುಕೊಂಡ ನಿರ್ಧಾರಗಳೆಲ್ಲವೂ ಸರಿಯಾಗಿದೆ. ನಾನು ಅವರ ಪರವಾಗಿ ನಿಲ್ಲುತ್ತೇನೆ. ನನಗೆ ಈಗ ಬಹಳ ಪುಳಕಿತವಾಗುತ್ತಿದೆ ಎಂದು ಆದಿತ್ಯನಾಥ್ ಅವರ ತಂದೆ ಆದಿತ್ಯನಾಥ್ ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಆದಿತ್ಯನಾಥ್ ಅವರ ಪೂರ್ವಾಶ್ರಮದ ಸೋದರಿ ಕೂಡ ಹರ್ಷ ವ್ಯಕ್ತಪಡಿಸಿದ್ದು ತಮ್ಮ ಸೋದರನಿಗೆ ಶುಭಾಶಯ ತಿಳಿಸಿದ್ದಾರೆ. ನಾವು ನಿನ್ನೆಯಿಂದ ಟಿವಿ ಮುಂದೆ ಕುಳಿತಿದ್ದೇವೆ. ಪಟಾಕಿಗಳನ್ನು ಸಿಡಿಸಿ, ಸಿಹಿತಿಂಡಿ ಹಂಚಿ ಸಂತೋಷಪಟ್ಟಿದ್ದೇವೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.
SCROLL FOR NEXT