ದೇಶ

ಮರ ಕತ್ತರಿಸಲು ವಿರೋಧ ವ್ಯಕ್ತ ಪಡಿಸಿದ ಯುವತಿಯನ್ನು ಜೀವಂತವಾಗಿ ಸುಟ್ಟ ಪಾಪಿಗಳು

Shilpa D

ಜೋಧ್ ಪುರ: ಮರಗಳನ್ನು ಕತ್ತರಿಸುವುದಕ್ಕೆ ವಿರೋಧ ವ್ಯಕ್ತ  ಪಡಿಸಿದ ಹಿನ್ನೆಲೆಯಲ್ಲಿ 20 ವರ್ಷದ ಯುವತಿಯನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ರಾಜಸ್ತಾನದ ಪಿಪ್ಡಾದಲ್ಲಿ ನಡೆದಿದೆ.

ಲಲಿತಾ ಮೃತ ದುರ್ದೈವಿ. ಲಲಿತಾ ಅವರ ಫಾರ್ಮ್ ನಲ್ಲಿದ್ದ ಮರಗಳನ್ನು ಕತ್ತರಿಸಲಿ ಅದೇ ಊರಿನ ಗ್ರಾಮಸ್ಥರು ಬಂದಿದ್ದರು,. ಇದಕ್ಕಿ ಲಲಿತಾ ವಿರೋಧ ವ್ಯಕ್ತ ಪಡಿಸಿದ್ದಳು.

ಘಟನೆಯಲ್ಲಿ ಊರಿನ ಮುಖ್ಯಸ್ಥ ರಣ್ವೀರ್ ಸಿಂಗ್ ಕೈವಾಡವಿದೆ. ಮರಗಳನ್ನು ಕತ್ತರಿಸಲು ವಿರೋಧ ವ್ಯಕ್ತ ಪಡಿಸಿದ ಲಲಿತಾಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ ಎಂದಪ ವರದಿಯಾಗಿದೆ.

ಯುವತಿಯ ಶವವನ್ನು ಜೋಧ್ ಪುರದ ಎಂಜೆಎಚ್ ಆಸ್ಪತ್ರೆಯಲ್ಲಿಡಲಾಗಿದೆ. ಪ್ರಕರಣ ಸಂಬಂಧ ಬೊರುಂದಾ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

SCROLL FOR NEXT