ಹುತಾತ್ಮ ಯೋಧರ ಪಾರ್ಥಿವ ಶರೀರ 
ದೇಶ

ಭಾರತೀಯ ಯೋಧರ ಶಿರಚ್ಛೇಧ: 'ಪರಿಣಾಮಕಾರಿ ಸಾಕ್ಷಿ' ಕೇಳಿದ ಪಾಪಿಸ್ತಾನ!

ತನ್ನ ಯೋಧರು ಗಡಿನಿಯಂತ್ರಣ ರೇಖೆಯೊಳಗೆ ನುಗ್ಗಿ ಭಾರತೀಯ ಯೋಧರ ಶಿರಚ್ಛೇಧ ಮಾಡಿ, ಅಂಗಾಂಗಗಳನ್ನು ಕತ್ತರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿ ಸಾಕ್ಷಿ ಒದಗಿಸುವಂತೆ...

ನವದೆಹಲಿ: ತನ್ನ ಯೋಧರು ಗಡಿನಿಯಂತ್ರಣ ರೇಖೆಯೊಳಗೆ ನುಗ್ಗಿ ಭಾರತೀಯ ಯೋಧರ ಶಿರಚ್ಛೇಧ ಮಾಡಿ, ಅಂಗಾಂಗಗಳನ್ನು ಕತ್ತರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿ( ಕ್ರಮ ಕೈಗೊಳ್ಳಬಹುದಾದಂತಹ) ಸಾಕ್ಷಿ ಒದಗಿಸುವಂತೆ ಪಾಪಿಸ್ತಾನ ಭಾರತಕ್ಕೆ ಹೇಳಿದೆ. 
ಘಟನೆ ನಡೆದ ಬಳಿಕ ಗಡಿಯಲ್ಲಿ ಉಂಟಾಗಿದ್ದ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಉಭಯ ರಾಷ್ಟ್ರಗಳ ಸೇನಾ ಕಾರ್ಯಾಚರಣೆಗಳ ಪ್ರಧಾನ ನಿರ್ದೇಶಕ (ಡಿಜಿಎಂಒ) ರ ನಡುವೆ ನಡೆದ ಹಾಟ್ ಲೈನ್ ಮಾತುಕತೆ ವೇಳೆಯಲ್ಲಿ ಭಾರತದ ಆರೋಪವನ್ನು ಪಾಕಿಸ್ತಾನದ ಡಿಜಿಎಂಒ ನಿರಾಕರಿಸಿದ್ದು, ತನ್ನ ಯೋಧರಿಂದ ಭಾರತೀಯ ಯೋಧರ ಶಿರಚ್ಛೇಧ ನಡೆದಿರುವ ಪ್ರಕರಣಕ್ಕೆ ಪರಿಣಾಮ ಸಾಕ್ಷಿ ಒದಗಿಸುವಂತೆ ಕೇಳಿದೆ. 
"ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿ, ಯೋಧರ ಶಿರಚ್ಛೇಧ ಮಾಡಿ ಅಂಗಾಂಗಗಳನ್ನು ಕತ್ತರಿಸಿರುವ ಆರೋಪವನ್ನು ನಿರಾಕರಿಸಿದೆ" ಎಂದು ಭಾರತೀಯ ಸೇನೆ ಹೇಳಿಕೆ ಬಿಡುಗಡೆ ಮಾಡಿದೆ. ಭಾರತದ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ಎಕೆ ಭಟ್ ಅವರೊಂದಿಗೆ ಮಾತನಾಡಿರುವ ಪಾಕಿಸ್ತಾನ ಡಿಜಿಎಂಒ ಸಾಹಿರ್ ಶಂಷಾದ್ ಮಿರ್ಜಾ, "ಪಾಕಿಸ್ತಾನ ಕದನ ವಿರಾಮವನ್ನೂ ಉಲ್ಲಂಘಿಸಿಲ್ಲ, ಭಾರತ ಹೇಳುತ್ತಿರುವ ಪ್ರದೇಶದಲ್ಲಿ ಪಾಕಿಸ್ತಾನದ ಸೇನಾ ಪಡೆ ಎಲ್ಒಸಿಯನ್ನೂ ದಾಟಿಲ್ಲ ಎಂದಿದ್ದಾರೆ. 
ಪಾಕಿಸ್ತಾನ ವೃತ್ತಿಪರ ಸೇನೆಯಾಗಿದ್ದು ನಡವಳಿಕೆಯ ಮಾನದಂಡಗಳನ್ನು ಪಾಲಿಸುತ್ತದೆ. ಕಾಶ್ಮೀರ ಕಣಿವೆಯಲ್ಲಿನ ಪರಿಸ್ಥಿತಿಯಿಂದ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ಭಾರತ ಪಾಕಿಸ್ತಾನದ ವಿರುದ್ಧ ಯೋಧರ ಶಿರಚ್ಛೇಧ ಆರೋಪ ಮಾಡುತ್ತಿದೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಭಾರತೀಯ ಸೇನೆ ಹೇಳುತ್ತಿರುವಂತೆ ಪಾಕ್ ಯೋಧರು ಭಾರತೀಯ ಯೋಧರ ಶಿರಚ್ಛೇಧ ಮಾಡಿದ್ದರೆ ಅದಕ್ಕೆ ಪರಿಣಾಮಕಾರಿಯಾದ ಸಾಕ್ಷಿ ಒದಗಿಸುವಂತೆ ಮಿರ್ಜಾ ಲೆಫ್ಟಿನೆಂಟ್ ಜನರಲ್ ಎಕೆ ಭಟ್ ಅವರಲ್ಲಿ ಹೇಳಿದ್ದಾರೆ ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT