ದೇಶ

ಗಾಯತ್ರಿ ಪ್ರಜಾಪತಿ ಅತ್ಯಾಚಾರ ಕೇಸು: ಇಬ್ಬರು ಸಹ ಆರೋಪಿಗಳಿಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶ

Sumana Upadhyaya
ನವದೆಹಲಿ: ಗಾಯತ್ರಿ ಪ್ರಜಾಪತಿ ಅತ್ಯಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಂದು ಇನ್ನೆರಡು ದಿನಗಳೊಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ವಿಕಾಸ್ ವರ್ಮ ಮತ್ತು ಅಮರಿಂದರ್ ಸಿಂಗ್ ಗೆ ಸೂಚಿಸಿದ್ದಾರೆ.

ಪ್ರಜಾಪತಿ ಮತ್ತು ಇಬ್ಬರು ಆರೋಪಿಗಳಿಗೆ ತ್ವರಿತ ನ್ಯಾಯಾಲಯ ಈ ಮುನ್ನ ಜಾಮೀನು ನೀಡಿತ್ತು. ಆದರೂ ಅಲಹಾಬಾದ್ ಹೈಕೋರ್ಟ್ ಅವರ ಜಾಮೀನು ಆದೇಶವನ್ನು ವಜಾ ಮಾಡಿತ್ತು. ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಉತ್ತರ ಪ್ರದೇಶ ವಿಶೇಷ ಕಾರ್ಯಪಡೆಯಿಂದ ಲಕ್ನೋದ ಆಶಿಯಾನಾ ಪ್ರದೇಶದಲ್ಲಿ ಗಾಯತ್ರಿ ಪ್ರಜಾಪತಿ ಮಾರ್ಚ್ 15ರಂದು ಬಂಧಿತರಾಗಿದ್ದರು. 

ಬಾಲಕಿಯ ತಾಯಿ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿದ್ದ ಸಮಾಜವಾದಿ ಪಕ್ಷದ ನಾಯಕ ಮತ್ತು ಮಾಜಿ ಸಚಿವ ಪ್ರಜಾಪತಿ ಸುಮಾರು ಒಂದು ತಿಂಗಳ ಕಾಲ ತನ್ನ ಬಂಧನವನ್ನು ತಪ್ಪಿಸಿಕೊಂಡದ್ದರು. 

ಕಳೆದ ಫೆಬ್ರವರಿಯಲ್ಲಿ ಪ್ರಜಾಪತಿ ಮತ್ತು 6 ಮಂದಿ ವಿರುದ್ಧ ಸುಪ್ರೀಂ ಕೋರ್ಟ್ ಆದೇಶದಂತೆ ಪೊಲೀಸ್ ದೂರು ನೀಡಲಾಗಿತ್ತು. ಉತ್ತರ ಪ್ರದೇಶ ಪೊಲೀಸರು ಈ ಏಳೂ ಜನರ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಿದ್ದರು.
SCROLL FOR NEXT