ಕುಡಲೂರು: 17 ವರ್ಷದ ಯುವಕನೊಬ್ಬನ ಮೇಲೆ ಬರ್ಬರ ದಾಳಿ ನಡೆಸಿರುವ ದುಷ್ಕರ್ಮಿಗಳ ತಂಡವೊಂದು ಆತನ ತಲೆಯನ್ನು ಕತ್ತರಿಸಿ ಪೊಲೀಸ್ ಠಾಣೆಗೆ ಎಸೆದಿರುವ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.
ದ್ವಿಚಕ್ರ ವಾಹನಗಳಲ್ಲಿ ಬಂದಿರುವ ದುಷ್ಕರ್ಮಿಗಳ ತಂಡ ಪೊಲೀಸ್ ಠಾಣೆಯೆದುರು ಬೈಕ್ ನಿಲ್ಲಿಸಿ ಯುವಕನ ತಲೆಯನ್ನು ಎಸೆದು ಪರಾರಿಯಾಗಿರುವುದು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹಳೇ ದ್ವೇಷದ ಹಿನ್ನಲೆಯಲ್ಲಿ ಪುದುಚೇರಿಯಲ್ಲಿರುವ ಕೆಲ ದುಷ್ಕರ್ಮಿಗಳು ಯುವಕನನ್ನು ಬರ್ಬರವಾಗಿ ಹತ್ಯೆಮಾಡಿದ್ದಾರೆಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ.
ಯುವಕನನ್ನು ಹತ್ಯೆ ಮಾಡಿದ ಬಳಿಕ ಆತನ ತಲೆಯನ್ನು ಬ್ಯಾಗ್ ವೊಂದರಲ್ಲಿ ಹಾಕಿಕೊಂಡು ದ್ವಿಚಕ್ರ ವಾಹನಗಳಲ್ಲಿ ಬಂದಿರುವ ದುಷ್ಕರ್ಮಿಗಳ ತಂಡ ಪೊಲೀಸ್ ಠಾಣೆಯಲ್ಲಿ ತಲೆಯನ್ನು ಎಸೆದು ಹೋಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಪೊಲೀಸರು, ಠಾಣೆಯಿಂದ 3 ಕಿ.ಮೀ. ದೂರದಲ್ಲಿರುವ ಕೊಳವೊಂದರಲ್ಲಿ ಯುವಕನ ದೇಹವನ್ನು ಪತ್ತೆಹಚ್ಚಿದ್ದಾರೆ.