ಫಾರೂಖ್ ಅಹ್ಮದ್ ದಾರ್ ನನ್ನು ಜೀಪ್ ಗೆ ಕಟ್ಟಿ ಎಳೆಯುತ್ತಿರುವುದು 
ದೇಶ

ವ್ಯಕ್ತಿಯನ್ನು ಜೀಪಿಗೆ ಕಟ್ಟಿ 28 ಕಿಮೀ ಎಳೆಯುವುದು ದೊಡ್ಡ ಸಾಹಸವೇ?: ಸಂತ್ರಸ್ಥ ಕಾಶ್ಮೀರಿ ಯುವಕ

ವ್ಯಕ್ತಿಯೊಬ್ಬರನ್ನು ಸೇನಾ ಜೀಪ್ ಗೆ ಕಟ್ಟಿ ಸುಮಾರು 28 ಕಿ.ಮೀ. ಎಳೆದೊಯ್ಯುವುದು ಒಂದು ದೊಡ್ಡ ಸಾಹಸವೇ....

ನವದೆಹಲಿ: ವ್ಯಕ್ತಿಯೊಬ್ಬರನ್ನು ಸೇನಾ ಜೀಪ್ ಗೆ ಕಟ್ಟಿ ಸುಮಾರು 28 ಕಿ.ಮೀ. ಎಳೆದೊಯ್ಯುವುದು ಒಂದು ದೊಡ್ಡ ಸಾಹಸವೇ ಎಂದು ಸಂತ್ರಸ್ಥ ಕಾಶ್ಮೀರಿ ಯುವಕ ಫಾರುಖ್ ಅಹ್ಮದ್ ದಾರ್ ಮಂಗಳವಾರ ಪ್ರಶ್ನಿಸಿದ್ದಾನೆ.
ಯುವಕನ್ನು ಜೀಪಿಗೆ ಕಟ್ಟಿದ ಪ್ರಕರಣದ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತಿರುವಾಗಲೇ, ಸೇನೆಯ ಜೀಪಿಗೆ ಕಟ್ಟಿ ಮಾನವ ಗುರಾಣಿಯಾಗಿ ಬಳಸಲ್ಪಟ್ಟ ಯುವಕ ಫರೂಖ್ ಧರ್ ನಾನೇನು ಪ್ರಾಣಿಯೇ? ಎಂದು ಪ್ರಶ್ನಿಸಿದ್ದಾನೆ. ಅಲ್ಲದೆ ಘಟನೆ ಕುರಿತು ನಡೆದ ಸೇನಾ ನ್ಯಾಯಾಲಯದ ತನಿಖೆ ಒಂದು ಕಣ್ಣೋರೆಸುವ ತಂತ್ರ ಅಷ್ಟೆ ಎಂದಿದ್ದಾರೆ.
ನಾನು ಕೇಳುವ ಒಂದೇ ಒಂದು ಪ್ರಶ್ನೆ ಎಂದರೆ, ಈ ರೀತಿ ಜೀಪಿನ ಮುಂಭಾಗಕ್ಕೆ ಕಟ್ಟಿ ಪ್ರದರ್ಶನಕ್ಕಿರಿಸಲು ನಾನೇನು ಪ್ರಾಣಿಯಾ? ನಾನೇನು ಕೋಣ ಅಥವಾ ಎಮ್ಮೆ ಆಗಿದ್ದೆನೆ? ಎಂದು ಆಕ್ರೋಶದ ನುಡಿಗಳನ್ನಾಡಿದ್ದಾರೆ.
ಮಧ್ಯ ಕಾಶ್ಮೀರದ ಬುದ್‍ಗಾಂ ಜಿಲ್ಲೆಯವನಾದ ಫರೂಖ್ ಧರ್ ಎಂಬ ಯುವಕನನ್ನು ಏಪ್ರಿಲ್ ತಿಂಗಳಲ್ಲಿ ಕಾಶ್ಮೀರ ಚುನಾವಣೆ ವೇಳೆ ಸೇನಾ ಜೀಪಿನ ಮುಂಭಾಗಕ್ಕೆ ಕಟ್ಟಿ ಕಲ್ಲು ತೂರಾಟ ತಡೆಯಲು ಮಾನವ ಗುರಾಣಿಯಾಗಿ ಬಳಸಲಾಗಿತ್ತು.
ಈ ಮಧ್ಯೆ ಯುವಕನ್ನು ಜೀಪಿಗೆ ಕಟ್ಟಿ ಮಾನವ ಗುರಾಣಿಯಾಗಿ ಬಳಸಿದ್ದ ಮೇಜರ್ ಲೀತುಲ್ ಗೊಗೊಯಿ ಅವರಿಗೆ ಸೇನೆಯ ಮುಖ್ಯಸ್ಥ  ಬಿಪಿನ್ ರಾವತ್ ಅವರು ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT