ದೇಶ

ಸುಖೋಯ್ -30 ವಿಮಾನ ಅವಶೇಷ ಪತ್ತೆ: ಸಿಬ್ಬಂದಿಗಾಗಿ ಮುಂದುವರಿದ ಶೋಧ ಕಾರ್ಯ

Sumana Upadhyaya
ಇಟಾನಗರ್(ಅರುಣಾಚಲ ಪ್ರದೇಶ): ಸುಖೊಯ್-30 ಯುದ್ಧ ವಿಮಾನದ ಕಾಣೆಯಾದ ಸಿಬ್ಬಂದಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ ಎಂದು ಅರುಣಾಚಲ ಪ್ರದೇಶ ಗೃಹ ಸಂಸದೀಯ ಕಾರ್ಯದರ್ಶಿ ಪಣಿ ರಾಮನ್ ತಿಳಿಸಿದ್ದಾರೆ.
ದಿನನಿತ್ಯದ ತರಬೇತಿ ಹಾರಾಟ ನಡೆಸಿದ್ದ ಸುಕೊಯ್-30 ಎಂಕೆಐ ಯುದ್ಧ ವಿಮಾನ ಕಳೆದ ಮಂಗಳವಾರ ನಾಪತ್ತೆಯಾಗಿತ್ತು. ಪೊಲೀಸ್ ಮಹಾ ನಿರ್ದೇಶಕ ಸಂದೀಪ್ ಗೋಯಲ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ವಿಮಾನದ ಅವಶೇಷ, ಬ್ಲಾಕ್ ಬಾಕ್ಸ್ ಕಳೆದ ಶುಕ್ರವಾರ ಬೆಳಗ್ಗೆ ಪತ್ತೆಹಚ್ಚಲಾಗಿದ್ದು ಸಿಬ್ಬಂದಿಗಳೇನಾಗಿದ್ದಾರೆ ಎಂದು ಇನ್ನೂ ಗೊತ್ತಾಗಿಲ್ಲ. ಇದಕ್ಕಾಗಿ ವಾಯುಪಡೆ ಸಿಬ್ಬಂದಿಯನ್ನು ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ ನಿಯೋಜಿಸಲಾಗಿದ್ದು ಅವರು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ ಎಂದರು.
ಯುದ್ಧ ವಿಮಾನದ ಅವಶೇಷ ಕಳೆದ ಶುಕ್ರವಾರ ಅರುಣಾಚಲ ಪ್ರದೇಶದ ತೇಜ್ ಪುರದಿಂದ 60 ಕಿಲೋ ಮೀಟರ್ ದೂರದಲ್ಲಿ ಪಶ್ಚಿಮ ಕಮೆಂಗ್ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಸಿಕ್ಕಿದೆ.
SCROLL FOR NEXT