ಸಂಗ್ರಹ ಚಿತ್ರ 
ದೇಶ

ಸುಖೋಯ್-30 ಯುದ್ಧ ವಿಮಾನ ಪತನ ಪ್ರಕರಣ: ಪೈಲಟ್'ನ ರಕ್ತಸಿಕ್ತ ಬೂಟು, ಇನ್ನಿತರೆ ವಸ್ತುಗಳು ಪತ್ತೆ

ಸುಖೋಯ್-30 ಯುದ್ಧ ವಿಮಾನ ಪತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಇಬ್ಬರು ಪೈಲಟ್ ಗಳ ಪೈಕಿ ಓರ್ವನ ರಕ್ತಸಿಕ್ತ ಬೂಟು ಹಾಗೂ ಇನ್ನಿತರೆ ವಸ್ತುಗಳು ಪತ್ತೆಯಾಗಿರುವುದಾಗಿ...

ಗುವಾಹಟಿ: ಸುಖೋಯ್-30 ಯುದ್ಧ ವಿಮಾನ ಪತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಇಬ್ಬರು ಪೈಲಟ್ ಗಳ ಪೈಕಿ ಓರ್ವನ ರಕ್ತಸಿಕ್ತ ಬೂಟು ಹಾಗೂ ಇನ್ನಿತರೆ ವಸ್ತುಗಳು ಪತ್ತೆಯಾಗಿರುವುದಾಗಿ ವರದಿಗಳು ತಿಳಿಸಿವೆ .
ಮೇ,23 ರಂದು ಬೆಳಿಗ್ಗೆ 10.30ರ ಸುಮಾರಿಗೆ ಅಸ್ಸಾಂನ ತೇಜ್'ಪುರದಿಂದ ಹಾರಾಟ ಪ್ರಾರಂಭಿಸಿದ್ದ ಸುಖೋಯ್-30 ಯುದ್ಧ ವಿಮಾನ ತೇಜ್'ಪುರದಿಂದ 60 ಕಿ.ಮೀ ದೂರ ತೆರಳುತ್ತಿದ್ದಂತೆ ರೆಡಾರ್ ಸಂಪರ್ಕ ಕಡಿತುಗೊಂಡಿತ್ತು. ವಿಮಾನ ನಾಪತ್ತೆಯಾದ ಪ್ರದೇಶ ಚೀನಾದ ಗಡಿ ಸಮೀಪವಿತ್ತು. 
ಮೇ.26 ರಂದು ವಿಮಾನದ ಅವಶೇಷ ತೇಜ್ ಪುರದಿಂದ 60 ಕಿ.ಮೀ ದೂರದ ದಟ್ಟ ಅರಣ್ಯದ ಮಧ್ಯೆ ಪತ್ತೆಯಾಗಿತ್ತು. ಯುದ್ಧ ವಿಮಾನದ ಬ್ಲಾಕ್ ಬಾಕ್ಸ್ ದೊರಕಿತ್ತು. ಆದರೆ, ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳ ಬಗ್ಗೆ ಯಾವುದೇ ಸುಳಿವುಗಳು ಸಿಕ್ಕಿರಲಿಲ್ಲ. ಯುದ್ಧ ವಿಮಾನ ಕೊನೆಯದಾಗಿ ಸಂಪರ್ಕಕ್ಕೆ ಸಿಕ್ಕಿದ ಸ್ಥಳಕ್ಕೆ ಸಮೀಪದಲ್ಲಿಯೇ ಅವಶೇಷಗಳು ಪತ್ತೆಯಾಗಿದ್ದವು. ನಾಪತ್ತೆಯಾಗಿದ್ದ ಪೈಲಟ್ ಗಳಿಗಾಗಿ ಅಧಿಕಾರಿಗಳು ತೀವ್ರ ಶೋಧ ಆರಂಭಿಸಿದ್ದರು. 
ಇದೀಗ ಇಬ್ಬರು ಪೈಲಟ್ ಗಳ ಪೈಕಿ ಒಬ್ಬ ಪೈಲಟ್'ನ ರಕ್ತಸಿಕ್ತವಾಗಿರುವ ಬೂಟು, ಅರೆ ಸುಟ್ಟ ಪಾನ್ ಕಾರ್ಡ್ ಮತ್ತು ಹಣದ ಪರ್ಸ್ ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ. ಆದರೆ, ಪೈಲಟ್ ಗಳು ಸ್ಥಿತಿ ಏನಾಗಿದೆ ಎಂಬುದು ಈ ವರೆಗೂ ತಿಳಿದುಬಂದಿಲ್ಲ. ಪೈಲಟ್ ಗಳ ಶವಗಳೂ ಕೂಡ ಈ ವರೆಗೂ ಪತ್ತೆಯಾಗಿಲ್ಲ 
ಪ್ರತಿಕೂಲ ಹವಾಮಾನ ಇರುವ ಹೊರತಾಗಿಯೂ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಲಾಗುತ್ತಿದೆ. ಆದರೂ, ನಾಪತ್ತೆಯಾಗಿರುವ ಇಬ್ಬರು ಪೈಲಟ್ ಗಳ ಬಗ್ಗೆ ಯಾವುದೇ ಮಾಹಿತಿಗಳಾಗಲೀ, ಸುಳಿವುಗಳಾಗಲೀ ದೊರಕಿಲ್ಲ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?