ಸಂಗ್ರಹ ಚಿತ್ರ 
ದೇಶ

ಸುಖೋಯ್-30 ಯುದ್ಧ ವಿಮಾನ ಪತನ ಪ್ರಕರಣ: ಪೈಲಟ್'ನ ರಕ್ತಸಿಕ್ತ ಬೂಟು, ಇನ್ನಿತರೆ ವಸ್ತುಗಳು ಪತ್ತೆ

ಸುಖೋಯ್-30 ಯುದ್ಧ ವಿಮಾನ ಪತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಇಬ್ಬರು ಪೈಲಟ್ ಗಳ ಪೈಕಿ ಓರ್ವನ ರಕ್ತಸಿಕ್ತ ಬೂಟು ಹಾಗೂ ಇನ್ನಿತರೆ ವಸ್ತುಗಳು ಪತ್ತೆಯಾಗಿರುವುದಾಗಿ...

ಗುವಾಹಟಿ: ಸುಖೋಯ್-30 ಯುದ್ಧ ವಿಮಾನ ಪತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಇಬ್ಬರು ಪೈಲಟ್ ಗಳ ಪೈಕಿ ಓರ್ವನ ರಕ್ತಸಿಕ್ತ ಬೂಟು ಹಾಗೂ ಇನ್ನಿತರೆ ವಸ್ತುಗಳು ಪತ್ತೆಯಾಗಿರುವುದಾಗಿ ವರದಿಗಳು ತಿಳಿಸಿವೆ .
ಮೇ,23 ರಂದು ಬೆಳಿಗ್ಗೆ 10.30ರ ಸುಮಾರಿಗೆ ಅಸ್ಸಾಂನ ತೇಜ್'ಪುರದಿಂದ ಹಾರಾಟ ಪ್ರಾರಂಭಿಸಿದ್ದ ಸುಖೋಯ್-30 ಯುದ್ಧ ವಿಮಾನ ತೇಜ್'ಪುರದಿಂದ 60 ಕಿ.ಮೀ ದೂರ ತೆರಳುತ್ತಿದ್ದಂತೆ ರೆಡಾರ್ ಸಂಪರ್ಕ ಕಡಿತುಗೊಂಡಿತ್ತು. ವಿಮಾನ ನಾಪತ್ತೆಯಾದ ಪ್ರದೇಶ ಚೀನಾದ ಗಡಿ ಸಮೀಪವಿತ್ತು. 
ಮೇ.26 ರಂದು ವಿಮಾನದ ಅವಶೇಷ ತೇಜ್ ಪುರದಿಂದ 60 ಕಿ.ಮೀ ದೂರದ ದಟ್ಟ ಅರಣ್ಯದ ಮಧ್ಯೆ ಪತ್ತೆಯಾಗಿತ್ತು. ಯುದ್ಧ ವಿಮಾನದ ಬ್ಲಾಕ್ ಬಾಕ್ಸ್ ದೊರಕಿತ್ತು. ಆದರೆ, ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳ ಬಗ್ಗೆ ಯಾವುದೇ ಸುಳಿವುಗಳು ಸಿಕ್ಕಿರಲಿಲ್ಲ. ಯುದ್ಧ ವಿಮಾನ ಕೊನೆಯದಾಗಿ ಸಂಪರ್ಕಕ್ಕೆ ಸಿಕ್ಕಿದ ಸ್ಥಳಕ್ಕೆ ಸಮೀಪದಲ್ಲಿಯೇ ಅವಶೇಷಗಳು ಪತ್ತೆಯಾಗಿದ್ದವು. ನಾಪತ್ತೆಯಾಗಿದ್ದ ಪೈಲಟ್ ಗಳಿಗಾಗಿ ಅಧಿಕಾರಿಗಳು ತೀವ್ರ ಶೋಧ ಆರಂಭಿಸಿದ್ದರು. 
ಇದೀಗ ಇಬ್ಬರು ಪೈಲಟ್ ಗಳ ಪೈಕಿ ಒಬ್ಬ ಪೈಲಟ್'ನ ರಕ್ತಸಿಕ್ತವಾಗಿರುವ ಬೂಟು, ಅರೆ ಸುಟ್ಟ ಪಾನ್ ಕಾರ್ಡ್ ಮತ್ತು ಹಣದ ಪರ್ಸ್ ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ. ಆದರೆ, ಪೈಲಟ್ ಗಳು ಸ್ಥಿತಿ ಏನಾಗಿದೆ ಎಂಬುದು ಈ ವರೆಗೂ ತಿಳಿದುಬಂದಿಲ್ಲ. ಪೈಲಟ್ ಗಳ ಶವಗಳೂ ಕೂಡ ಈ ವರೆಗೂ ಪತ್ತೆಯಾಗಿಲ್ಲ 
ಪ್ರತಿಕೂಲ ಹವಾಮಾನ ಇರುವ ಹೊರತಾಗಿಯೂ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಲಾಗುತ್ತಿದೆ. ಆದರೂ, ನಾಪತ್ತೆಯಾಗಿರುವ ಇಬ್ಬರು ಪೈಲಟ್ ಗಳ ಬಗ್ಗೆ ಯಾವುದೇ ಮಾಹಿತಿಗಳಾಗಲೀ, ಸುಳಿವುಗಳಾಗಲೀ ದೊರಕಿಲ್ಲ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT