ಇಸಿಸ್ 
ದೇಶ

ಕಣ್ಣೂರಿನ 6 ಯುವಕರು ಇಸಿಸ್ ಉಗ್ರ ಸಂಘಟನೆಗೆ ಸೇರಿದ್ದಾರೆ: ಕೇರಳ ಪೊಲೀಸರು

ಕೇರಳದ ಕಣ್ಣೂರು ಮೂಲದ ಆರು ಮಂದಿ ಯುವಕರು ಸಿರಿಯಾದಲ್ಲಿ ಇಸಿಸ್ ಉಗ್ರ ಸಂಘಟನೆ ಸೇರಿದ್ದಾರೆ ಎಂದು ಕೇರಳ ಪೊಲೀಸರು ಸ್ಪಷ್ಟಪಡಿಸಿದ್ದಾರೆ...

ಕಣ್ಣೂರು: ಕೇರಳದ ಕಣ್ಣೂರು ಮೂಲದ ಆರು ಮಂದಿ ಯುವಕರು ಸಿರಿಯಾದಲ್ಲಿ ಇಸಿಸ್ ಉಗ್ರ ಸಂಘಟನೆ ಸೇರಿದ್ದಾರೆ ಎಂದು ಕೇರಳ ಪೊಲೀಸರು ಸ್ಪಷ್ಟಪಡಿಸಿದ್ದಾರೆ. 
ಇವರೆಲ್ಲಾ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಸದಸ್ಯರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಆರು ಮಂದಿ ಪೈಕಿ ಓರ್ವ ಉಗ್ರ 25 ವರ್ಷದ ಮೊಹಮ್ಮದ್ ಶಾಜೀಲ್ ಎಂಬುವನು ದಾಳಿಯಲ್ಲಿ ಮೃತಪಟ್ಟಿರುವುದಾಗಿ ಆತನ ಪತ್ನಿ ವಿದೇಶದಲ್ಲಿರುವ ಮಾವನಿಗೆ ತಿಳಿಸಿದ್ದಾರೆ. ಮತ್ತೋರ್ವ ಉಗ್ರ ರಶೀದ್ ಮೃತಪಟ್ಟಿರುವುದಾಗಿ ಆತನ ಹೆಂಡತಿ ರಶೀದ್ ತಾಯಿಗೆ ತಿಳಿಸಿದು ಬಂದಿದೆ.
ಇನ್ನು ಕಳೆದ ವಾರ ಅಕ್ಟೋಬರ್ 25ರಂದು ಇಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಮೇರೆಗೆ ಪೊಲೀಸರು ಕಣ್ಣೂರಿನಲ್ಲಿ ಮಿತಿಲಝ್, ಅಬ್ದುಲ್ ರಝಾಕ್, ರಶೀದ್ ಎಂಬುವರನ್ನು ಬಂಧಿಸಿದ್ದರು. 
ಸುಮಾರು 100ಕ್ಕೂ ಹೆಚ್ಚು ಭಾರತೀಯ ಯುವಕರು ಇಸಿಸ್ ಸೇರಲು ದೇಶವನ್ನು ತೊರೆದಿದ್ದು ಇವರಲ್ಲಿ ಬಹತೇಕರು ಕೇರಳದವರೇ ಆಗಿದ್ದಾರೆ. ಕಳೆದ 2016ರ ಜುಲೈನಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಯಲ್ಲಿ ಕಳೆದ ಒಂದು ತಿಂಗಳಲ್ಲಿ 21 ಮುಸ್ಲಿಂ ಯುವಕರು ನಾಪತ್ತೆಯಾಗಿದ್ದು ಇವರೆಲ್ಲಾ ಇಸಿಸ್ ಉಗ್ರ ಸಂಘಟನೆಗೆ ಸೇರಿರಬಹುದು ಎಂದು ಹೇಳಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT