ಲಖನೌ: ದೇಶದಲ್ಲಿ ಹಿಂದೂ ಭಯೋತ್ಪದನೆ ಇದೆ ಎಂದು ಹೇಳಿಕೆ ನೀಡಿರುವ ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾ ಮುಖಂಡರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಮಲ್ ಹಾಸನ್ ರಂತವರು ಹಿಂದೂ ಭಯೋತ್ಪಾದಕರ ಅನುಯಾಯಿಗಳು ತಮ್ಮು ಪಕ್ಷಪಾತದ ಕೋಮು ಅಜೆಂಡಾವನ್ನು ತೋರಿಸಲು ಮಾತ್ರ ಇಂತಹ ಆರೋಪಗಳನ್ನು ಮಾಡುತ್ತಾರೆ. ಇಂತಹವರನ್ನು ನಿಭಾಯಿಸಲು ಬೇರು ಮಾರ್ಗಗಳಿಲ್ಲ ಮೊದಲು ಅವರನ್ನು ಗಲ್ಲಿಗೇರಿಸಬೇಕು ಇಲ್ಲದಿದ್ದರೆ ಗುಂಡಿಟ್ಟು ಹತ್ಯೆ ಮಾಡಬೇಕು ಎಂದು ಹಿಂದೂ ಮಹಾಸಭಾದ ಉಪಾಧ್ಯಕ್ಷ ಪಂಡಿತ್ ಅಶೋಕ್ ಶರ್ಮಾ ಹೇಳಿದ್ದಾರೆ.
ಹಿಂದೂ ಧರ್ಮದ ವಿರುದ್ಧ ಪಕ್ಷಪಾತ ಮಾಡುವವರಿಗೆ ಬದುಕುವ ಯಾವುದೇ ಹಕ್ಕನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಇದರ ಜತೆಗೆ ಕಮಲ್ ಹಾಸನ್ ಹಾಗೂ ಅವರ ಕುಟುಂಬಸ್ಥರ ಚಿತ್ರಗಳನ್ನು ಬಹಿಷ್ಕಾರಿಸಬೇಕು ಎಂದು ಹೇಳಿದ್ದಾರೆ.
ನವೆಂಬರ್ 7ರಂದು ಕಮಲ್ ಹಾಸನ್ ಅವರ ಹುಟ್ಟುಹಬ್ಬವಾಗಿದ್ದು ಅಂದೇ ತಮ್ಮ ರಾಜಕೀಯ ಬದುಕಿನ ಬಗ್ಗೆ ಘೋಷಿಸಲಿದ್ದಾರೆ. ಆದರೆ ಇಲ್ಲಿಯವರೆಗೂ ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬ ಮಾಹಿತಿ ಇಲ್ಲ. ಸದ್ಯ ರಾಜಕೀಯ ಎಂಟ್ರಿಗಾಗಿ ನೋಡುತ್ತಿರುವ ಕಮಲ್ ಹಾಸನ್ ಅವರ ಹಿಂದೂ ಭಯೋತ್ಪಾದನೆ ಹೇಳಿಕೆ ಇದೀಗ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos