ಬಿ.ಆರ್.ಅಂಬೇಡ್ಕರ್ 
ದೇಶ

ಡಾ. ಅಂಬೇಡ್ಕರ್ ಶಾಲಾ ಸೇರ್ಪಡೆಯ 117ನೇ ವರ್ಷಾಚರಣೆ, ಮಹಾರಾಷ್ಟ್ರ ಸರ್ಕಾರದಿಂದ ನ 7 'ವಿದ್ಯಾರ್ಥಿಗಳ ದಿನ' ಎಂದು ಘೋಷಣೆ

ಮಹಾರಾಷ್ಟ್ರ ಸರ್ಕಾರ ತನ್ನ ರಾಜ್ಯದಲ್ಲಿನ ಶಾಲೆ-ಕಾಲೇಜುಗಳಲ್ಲಿ ನವೆಂಬರ್ 7 ನ್ನು 'ವಿದ್ಯಾರ್ಥಿಗಳ ದಿನ'ಎಂದು ಆಚರಿಸಬೇಕೆಂದು ಕರೆ ನೀಡಿದೆ.

ಮುಂಬೈ: ಮಹಾರಾಷ್ಟ್ರ ಸರ್ಕಾರ ತನ್ನ ರಾಜ್ಯದಲ್ಲಿನ ಶಾಲೆ-ಕಾಲೇಜುಗಳಲ್ಲಿ ನವೆಂಬರ್ 7 ನ್ನು 'ವಿದ್ಯಾರ್ಥಿಗಳ ದಿನ'ಎಂದು ಆಚರಿಸಬೇಕೆಂದು ಕರೆ ನೀಡಿದೆ. ಅಂದಿಗೆ ಸರಿಯಾಗಿ 117 ವರ್ಷಗಳ ಹಿಂದೆ ಡಾ.ಬಿ ಆರ್ ಅಂಬೇಡ್ಕರ್ ಶಾಲಾ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದರು.
ಈ ನಿಟ್ಟಿನಲ್ಲಿ ಅ. 27 ರಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಕ್ರೀಡಾ ಇಲಾಖೆಯಿಂದ ಹೊರಡಿಸಲಾದ ಸರ್ಕಾರದ ನಿರ್ಣಯ (ಜಿಆರ್) ದಲ್ಲಿ ಅಂಬೇಡ್ಕರ್ ಶಾಲಾ ವಿದ್ಯಾಭ್ಯಾಸ ಪ್ರಾರಂಭದೊಡನೆ ಹೊಸ ಯುಗವೊಂದು ಪ್ರಾರಂಭವಾಗಿತ್ತು ಎಂದು ಬಣ್ಣಿಸಲಾಗಿದೆ. ಡಾ ಅಂಬೇಡ್ಕರ್  ರಾಷ್ಟ್ರಕ್ಕೆ  ನೀಡಿದ ಸಂವಿಧಾನದ ಕಾರಣ  ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಕಾನೂನಿನ ಮೌಲ್ಯಗಳು ಇಂದು ಸಮಾಜದಲ್ಲಿ ಬೇರೂರಿವೆ ಎಂದು ನಿರ್ಣಯದಲ್ಲಿ ವಿವರಿಸಿದೆ.
" ಡಾ. ಬಿ.ಆರ್.ಅಂಬೇಡ್ಕರ್ ಅವರು ಶಾಲೆಯಲ್ಲಿ ವಿದ್ಯಾರ್ಥಿಯಾಗಿ ದಾಖಲಾಗಿದ್ದು, ಇದು ಒಂದು ಐತಿಹಾಸಿಕ ಘಟನೆ ಮತ್ತು ಭಾರತದ ಇತಿಹಾಸದ ದಿಕ್ಕನ್ನು ಬದಲಿಸಿದೆ. ಡಾ. ಅಂಬೇಡ್ಕರ್ ಅವರು ಜೀವಮಾನದ ಪರ್ಯಂತ ವಿದ್ಯಾರ್ಥಿಯಾಗಿದ್ದರು ಮತ್ತು ಅವರ ಜೀವನದುದ್ದಕ್ಕೂ ಕಲಿಕಾ ಆಸಕ್ತಿ ತಾಳಿದ್ದರು"
"ಪ್ರತಿ ವಿದ್ಯಾರ್ಥಿ ಯೂ ದೇಶದ ಭವಿಷ್ಯ ಮತ್ತು ಶಿಕ್ಷಣ ಮಾತ್ರ ಪ್ರಗತಿಗೆ ಸಾಧನ ಆಗಿದೆ, ಎಲ್ಲಾ ಶಾಲೆಗಳು ಮತ್ತು ಜೂನಿಯರ್ ಕಾಲೇಜುಗಳು ಪ್ರಬಂಧ ಬರವಣಿಗೆ, ಚರ್ಚಾ ಸ್ಪರ್ಧೆಗಳು, ಕವಿತೆ ಓದುವಿಕೆ ಮತ್ತಿತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಆ ದಿನವನ್ನು ಸ್ಮರಣೀಯವಾಗಿಸಬೇಕು "ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಡಾ.ಅಂಬೇಡ್ಕರ್ ನವೆಂಬರ್ 7, 1900 ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪ್ರತಾಪ್ ಸಿಂಗ್ ಪ್ರೌಢ ಶಾಲೆಗೆ  ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡರು. ಅವರು ಶಾಲೆಯ ದಾಖಲಾತಿಯಲ್ಲಿ '1914' ಎಂಬ ರೋಲ್ ನಂಬರ್ ಪಡೆದಿದ್ದರು. ಅವರು ಸಹಿ ಮಾಡಿದ್ದ ಆ ದಾಖಲಾತಿ ಪತ್ರವನ್ನು ಶಾಲೆಯವರು ಇಂದಿಗೂ ಐತಿಹಾಸಿಕ ದಾಖಲೆ ಎಂದು ಪರಿಗಣಿಸಿ ಕಾಪಾಡಿಕೊಂಡು ಬಂದಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT