ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಉಂಟಾಗಿರುವ ಹೊಗೆಗೆ ಭಾರತದ ರೈತರೇ ಕಾರಣ ಎಂದು ಪಾಕಿಸ್ತಾನದ ಅಧಿಕಾರಿಗಳು ದೂಷಿಸಿದ್ದಾರೆ.
ಅಲ್ಲಿನ ಪಂಜಾಬ್ ಪ್ರಾಂತ್ಯದಲ್ಲಿ ಹೊಗೆ ಆವರಿಸಿರುವುದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಪ್ರಾಂತ್ಯದ ಸರ್ಕಾರ ಹಾಗೂ ಹವಾಮಾನ ಇಲಾಖೆ ಅಧಿಕಾರಿಗಳು ಪರಿಹಾರ ಕಂಡುಕೊಳ್ಳುವಲ್ಲಿ ನಿರತರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಭಾರತದ ಕೃಷಿ ಭೂಮಿಯಿಂದ ಹೊರಬರುತ್ತಿರುವ ಹೊಗೆ ಪಾಕಿಸ್ತಾನದಲ್ಲಿ ಉಂಟಾಗಿರುವ ದಟ್ಟ ಹೊಗೆಗೆ ಕಾರಣ ಎಂದು ಪಾಕಿಸ್ತಾನದ ಸಚಿವ ಜಾಕಿಯಾ ನವಾಜ್ ಖಾನ್ ಹೇಳಿದ್ದಾರೆ.