ದೇಶ

ರವಿಶಂಕರ್-ಆದಿತ್ಯನಾಥ್ ಭೇಟಿ; ಅಯೋಧ್ಯೆ ರಾಮಮಂದಿರದ ಬಗ್ಗೆ ಚರ್ಚೆ

Srinivas Rao BV
ಲಖನೌ: ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಅವರು ನ.15 ರಂದು ಉತ್ತರ ಪ್ರದೇಶದ ಮುಖ್ಯಂಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದು, ಅಯೋಧ್ಯೆಯ ವಿವಾದದ ಬಗ್ಗೆ ಮಾತನಾಡಿದ್ದಾರೆ. 
ಮುಖ್ಯಮಂತ್ರಿಗಳ ನಿವಾಸದಲ್ಲಿ ರವಿಶಂಕರ್ ಸುಮಾರು 30 ನಿಮಿಷಗಳ ಮಾತುಕತೆ ನಡೆಸಿದ್ದು, ಹಲವು ದಶಕಗಳಿಂದ ಬಗೆಹರಿಯದೇ ಉಳಿದಿರುವ ಸಮಸ್ಯೆಗೆ ತಾವು ಕಂಡುಕೊಂಡಿರುವ ’ಮಾತುಕತೆಯ ಪರಿಹಾರ’ವನ್ನು ಮುಖ್ಯಮಂತ್ರಿಗಳಿಗೆ ವಿವರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಐಎಎನ್ಎಸ್ ಗೆ ತಿಳಿಸಿದ್ದಾರೆ.
ಅಯೋಧ್ಯೆಯ ರಾಮಮಂದಿರ ವಿವಾದವನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವುದಕ್ಕೆ ರವಿಶಂಕರ್ ಉತ್ಸಾಹ ತೋರಿದ್ದು, ಮುಸ್ಲಿಂ ನಾಯಕರೊಂದಿಗೆ ಚರ್ಚೆ ನಡೆಸಲು ಉದ್ದೇಶಿಸಿದ್ದಾರೆ. ಇದೇ ವೇಳೆ ಅಯೋಧ್ಯೆಗೆ ತೆರಳಿ ಹಿಂದೂ ನಾಯಕರು, ರಾಮಮಂದಿರಕ್ಕೆ ಸಂಬಂಧಪಟ್ಟವರೊಂದಿಗೂ ರವಿಶಂಕರ್ ಮಾತುಕತೆ ನಡೆಸಿದ್ದಾರೆ. 
SCROLL FOR NEXT