ದೇಶ

ಪ್ರಚಾರಕ್ಕಾಗಿ ಇತಿಹಾಸ ತಿರುಚುವವರನ್ನು ಕೇಂದ್ರ ಬೆಂಬಲಿಸಲ್ಲ: ಬಿಜೆಪಿ ಶಾಸಕ

Manjula VN
ನವದೆಹಲಿ: ಪ್ರಚಾರಕ್ಕಾಗಿ ಇತಿಹಾಸವನ್ನು ತಿರುಚುವ ವ್ಯಕ್ತಿಗಳು ಯಾರೇ ಆದರೂ ಅವರನ್ನು ಕೇಂದ್ರ ಬೆಂಬಲಿಸುವುದಿಲ್ಲ ಎಂದು ಬಿಜೆಪಿ ಶಾಸಕ ರಾಮ್ ಕದಮ್ ಅವರು ಬುಧವಾರ ಹೇಳಿದ್ದಾರೆ. 
ಪದ್ಮಾವತಿ ಚಿತ್ರ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಚಾರಕ್ಕಾಗಿ ಇತಿಹಾಸ ತಿರುಚುವವರು ಯಾರೇ ಆದರೂ ಆವರನ್ನು ನಾವು ಬೆಂಬಲಿಸುವುದಿಲ್ಲ. ಅಗತ್ಯಬಿದ್ದರೆ, ಚಿತ್ರವನ್ನು ಚಿತ್ರಕ್ಕೆ ನಿಷೇಧ ಹೇರಲಾಗುತ್ತದೆ ಎಂದು ಹೇಳಿದ್ದಾರೆ. 
ಚಿತ್ರದ ಪ್ರಚಾರಕ್ಕಾಗಿ ಇತಿಹಾಸವನ್ನು ತಿರುಚುವ ಯಾವುದೇ ವ್ಯಕ್ತಿಯನ್ನು ಕೇಂದ್ರ ಬೆಂಬಲಿಸುವುದಿಲ್ಲ. ಚಿತ್ರ ಕುರಿತಂತೆ ಚರ್ಚೆಗಳು ನಡೆಯುತ್ತಿದ್ದು, ಅಗತ್ಯಬಿದ್ದರೆ ಚಿತ್ರಕ್ಕೆ ನಿಷೇಧ ಹೇರಲಾಗುತ್ತದೆ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಪದ್ಮಾವತಿ ಚಿತ್ರದ ಕೆಲ ದೃಶ್ಯಾವಳಿಗಳಿಗೆ ಕತ್ತರಿ ಹಾಕಲು ಒಪ್ಪದೇ ಹೋದಲ್ಲಿ, ಭವಿಷ್ಯದಲ್ಲಿ ಅವರ ಚಿತ್ರಗಳಾವುದೂ ಬರದಂತೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 
SCROLL FOR NEXT