ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲವನ್ನು ಘೋಷಿಸಿರುವ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಗೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಧನ್ಯವಾದ ಹೇಳಿದ್ದಾರೆ. ಅವರ ಒಗ್ಗಟ್ಟಿನ ಹೋರಾಟವು ಬಿಜೆಪಿಯನ್ನು ಹಿಮ್ಮೆಟ್ಟಿಸಲಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಮತ್ತು ಪಟೇಲ್ ನೇತೃತ್ವದ ಪಟೀದಾರ್ ಅನಾಮತ್ ಆಂದೋಲನ್ ಸಮಿತಿ (ಪಿಎಎಎಸ್)ಿಬ್ಬರೂ ಒಟ್ಟಾಆಗಿಯೇ ಕೆಲಸ ಮಾಡುತ್ತೇವೆ. ಇಬ್ಬರೂ ಸಹ ಮೀಸಲಾತಿ ಕೋಟಾಗಾಗಿ ಬೇಡಿಕೆ ಇಡುತ್ತೇವೆ.ಈ ಸಂಬಂಧ ಮುಂದಿನ ನಿಲುವುಗಳೇನೆನ್ನುವುದನ್ನು ಭವಿಷಯದಲ್ಲಿ ನಿರ್ಧರಿಸಲಾಗುತ್ತದೆ. ಗುಜರಾತ್ ಚುನಾವಣೆಯಲ್ಲಿ ಗೆಲುವು ಅಗತ್ಯವಾಗಿದೆ, ಇದಕ್ಕಾಗಿ ರಾಜ್ಯದ ಜನರಿಗೆ ನಿಡುವ ಭರವಸೆಗಳನ್ನು ಪೂರ್ಣಗೊಳಿಸಬೇಕು. ಮಾಜಿ ಕೇಂದ್ರ ಸಚಿವ ಸಿಬಲ್ ಹೇಳಿದರು.
ಮೀಸಲಾತಿ ವಿಚಾರದಲ್ಲಿ ಪಿಎ ಎ ಎಸ್ ಜತೆಗೆ ಸಭೆ ನಡೆಸಿದ ಸಮಯದಲ್ಲಿ ಸಹ ಕಪಿಲ್ ಸಿಬಲ್ ತಾವು ಬಿಜೆಪಿಯವರ ಕಾರ್ಯಕ್ರಮಗಳನ್ನು ಟೀಕಿಸಿದರು. "ಕಳೆದ ಇಪ್ಪತ್ತೆರಡು ವರ್ಷಗಳಲ್ಲಿ ಬಿಜೆಪಿ ಪಟೇಲ್ ಸಮುದಾಯದ ಅಭಿವೃದ್ಧಿಗಾಗಿ ಏನನ್ನೂ ಮಾಡಿಲ್ಲ. ಇದೀಗ ಸಂಘಟನೆ ಬಿಜೆಪಿ ವಿರುದ್ಧ ಹೋರಾಡುತ್ತಿರುವುದಕ್ಕೆ ನಮಗೆ ಸಂತಸವಿದೆ.ಅವರು ಒಂದು ಸಿದ್ದಾಂತವನ್ನಿಟ್ಟುಕೊಂಡು ನಮ್ಮೊಂದಿಗೆ ಬಂದಿರುವುದು ನಿಜಕ್ಕೂ ಸ್ವಾಗತಾರ್ಹ." ಸಿಬಲ್ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos