ರಾಹುಲ್ ಗಾಂಧಿ 
ದೇಶ

ನಾವು ಅಧಿಕಾರಕ್ಕೆ ಬಂದರೆ ಗುಜರಾತಿನಲ್ಲಿ ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ಸ್ಥಾಪನೆ: ರಾಹುಲ್ ಗಾಂಧಿ

ಗುಜರಾತಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀನುಗಾರಿಕೆ ಸಂಬಂಧ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸುವುದಾಗಿ ಕಾಂಗ್ರೆಸ್ ಉಪಾಂಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಪೋರಬಂದರ್: ಗುಜರಾತಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀನುಗಾರಿಕೆ ಸಂಬಂಧ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸುವುದಾಗಿ ಕಾಂಗ್ರೆಸ್ ಉಪಾಂಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಪೋರಬಂದರ್ ನಲ್ಲಿ ಮೀನುಗಾರರ ಸಮಾವೇಶದಲ್ಲಿ ಮಾತನಾಡಿದ ರಾಹುಲ್ "ಗುಜರಾತಿನಲ್ಲಿ ಮೀನುಗಾರಿಕೆಗಾಗಿ ಪ್ರತ್ಯೇಕ ಸಚಿವಾಲಯ ಇರಬೇಕು, ಕಾಂಗ್ರೆಸ್ ಗುಜರಾತಿನಲ್ಲಿ ಅಧಿಕಾರಕ್ಕೆ ಬಂದರೆ ನಾವು ಅದನ್ನು ಮಾಡಲಿದ್ದೇವೆ." ಎಂದರು. ಜತೆಗೆ ಅವರು ಮೀನುಗಾರರಿಗೆ ನಾವು ಎಲ್ಲಾ ವಿಧದಲ್ಲಿಯೂ ಸಹಾಯ ಒದಗಿಸುವುದಾಗಿ ಭರವಸೆ ನೀಡಿದರು.
"ಕಪ್ಪು ಹಣವನ್ನು ಬಿಳಿಯಾಗಿಸಲು ನರೇಂದ್ರ ಮೋದಿ ನೋಟ್ ಬ್ಯಾನ್ ಅನ್ನು ಅಸ್ತ್ರವಾಗಿಸಿಕೊಂಡರು". ಎಂದ ರಾಹುಲ್ "ಗುಜರಾತಿನಲ್ಲಿ ಬೆರಳೇಣಿಕೆಯಷ್ಟು ಬೃಹತ್ ಕೈಗಾರಿಕೋದ್ಯಮಿಗಳಿರಬಹುದು ಆದರೆ ಲಕ್ಷ ಸಂಖ್ಯೆಯಲ್ಲಿ ಕಾರ್ಮಿಕರು, ರೈತರೂ ಇದ್ದಾರೆ, ಕಳೆದ ಕೆಲವು ವರ್ಷಗಳಲ್ಲಿ, ಗುಜರಾತಿನಲ್ಲಿ ಕೇವಲ ಐದು ರಿಂದ ಹತ್ತು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ, ಆ ಕೈಗಾರಿಕೋದ್ಯಮಿಗಳು ಪ್ರಧಾನಿ ಮೋದಿ ಪರ ಪ್ರಚಾರಕ್ಕಾಗಿ ಕೊಡುಗೆ ನೀಡಿದ್ದಾರೆ" ಎಂದು ಹೇಳಿದರು.
"ಆದರೆ ಗುಜರಾತ್ ಐದು ಅಥವಾ ಹತ್ತು ಉದ್ಯಮಿಗಳಿಗೆ ಸೇರಿದ್ದಲ್ಲ, ಇದು ರೈತರಿಗೆ ಮತ್ತು ಮೀನುಗಾರರಿಗೆ ಸೇರಿದೆ"  ಎಂದ ರಾಹುಲ್ ಮೋದಿ ಅವರ ಮನ್ ಕಿ ಬಾತ್ ಬಗೆಗೆ ಹೇಳುತ್ "ಕಾಂಗ್ರೆಸ್ ಮತ್ತು ನಾನು ನಮ್ಮ 'ಮನ್ ಕಿ ಬಾತ್' ಹೇಳಲು ಬಯಸುವುದಿಲ್ಲ. ಬದಲಾಗಿ ನಿಮ್ಮ (ಜನರ)'ಮಾನ್ ಕಿ ಬಾತ್' ಅನ್ನು ಕೇಳಲು ಬಯಸುತ್ತೇವೆ" ಎಂದರು.
"ಮೋದಿ ಟಾಟಾ ನ್ಯಾನೋ ಕಾರ್ಖಾನೆಗಾಗಿ 33 ಸಾವಿರ ಕೋಟಿ ರೂ. ನೀಡಿದ್ದಾರೆ. ಆದರೆ ನಾವು ನರೇಗಾ ಯೋಜನೆಗೆ 33  ಸಾವಿರ ಕೋಟಿ ನೀಡೀದ್ದೆವು. ನೀವು ಟಾಟಾ ನ್ಯಾನೋ ಗಾಗಿ ಭೂಮಿ, ನೀರು, ಮೂಲಭೂತ ಸೌಕರ್ಯಗಳನ್ನು ಕಳೆದುಕೊಂಡಿರಿ. ಆದರೆ ಇಂದು ನ್ಯಾನೋ ರಸ್ತೆಯಲ್ಲೆಲ್ಲೂ ಕಾಣುತ್ತಿಲ್ಲ! ಮೋದಿ ಬಳಿ ಯಾವುದೇ ಉದ್ಯಮಿ ಹಣ ಕೇಳಿದರೆ ಅವರಿಗೆ 33 ಸಾವಿರ ಕೋಟಿ ನೀಡುತ್ತಾರೆ. ಅದೇ ಯಾವ ಮೀನುಗಾರರು ಹೋಗಿ ಅವರ ಅಭಿವೃದ್ಧಿಗೆ ಹಣ ಕೇಳಿದಲ್ಲಿ ಅವರಿಗೆ 300 ಕೋಟಿಯನ್ನು ನೀದಲೂ ಅವರ ಬಳಿ ಇರುವುದಿಲ್ಲ." ರಾಹುಲ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT