ಕೆ ಕೆ ಶರ್ಮಾ 
ದೇಶ

ಭಾರತದಲ್ಲಿ 36 ಸಾವಿರ ರೊಹಿಂಗ್ಯಾಗಳಿದ್ದು, ಉಗ್ರರ ನಂಟು ಸಾದ್ಯತೆ: ಬಿಎಸ್ ಎಫ್

ಸುಮಾರು 36 ಸಾವಿರ ರೊಹಿಂಗ್ಯಾಗಳು ದೇಶದ ವಿವಿಧ ಭಾಗಗಳಲ್ಲಿ ಇದ್ದಾರೆ. ದೇಶದೊಳಗೆ ಅಕ್ರಮವಾಗಿ ನುಸುಳಿರುವ ಇವರು ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ .......

ನವದೆಹಲಿ: ಸುಮಾರು 36 ಸಾವಿರ  ರೊಹಿಂಗ್ಯಾಗಳು ದೇಶದ ವಿವಿಧ ಭಾಗಗಳಲ್ಲಿ ಇದ್ದಾರೆ. ದೇಶದೊಳಗೆ ಅಕ್ರಮವಾಗಿ ನುಸುಳಿರುವ ಇವರು  ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಸಾದ್ಯತೆಯನ್ನು  ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಗಡಿ ಭದ್ರತಾ ಪಡೆ  ಹೇಳಿದೆ.
2.5 ಲಕ್ಷ ಯೋಧರ ಪಡೆಯ ನಿರ್ದೇಶಕರಾದ ಕೆಕೆ ಶರ್ಮಾ ಅವರು ಹೇಳಿದಂತೆ ಅವರ ಪಡೆಗಳು ಈ ವರ್ಷದ ಆರಂಭದಿಂದ ಅಕ್ಟೋಬರ್ 31 ರವರೆಗೆ 87 ರೋಹಿಂಗ್ಯಾ ಮುಸ್ಲಿಮರನ್ನು ಇಂಡೋ-ಬಾಂಗ್ಲಾ ಗಡಿಯಲ್ಲಿ ಬಂಧಿಸಿವೆ ಮತ್ತು 76 ರೊಹಿಂಗ್ಯಾಗಳನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ. "ನನಗೆ ದೊರಕಿದ ಮಾಹಿತಿಯು ಅನುಸಾರ , ಸುಮಾರು 36,ಸಾವಿರ ರೊಹಿಂಗ್ಯಾಗಳು ದೇಶದ ವಿವಿಧ ಭಗಗಳಲ್ಲಿ ಇದ್ದಾರೆ.ಇದು ಕೇವಲ ಸಾಮಾನ್ಯ ಅವಲೋಕನ ಮಾತ್ರವೇ ಆಗಿದೆ" ಎಂದು  ಅವರು ಹೇಳಿದ್ದಾರೆ. ಡಿಸೆಂಬರ್ 1 ರಂದು ಬಿ ಎಸ್ ಎಫ್ ನ 52 ನೇ ರೈಸಿಂಗ್ ಡೇ ಕಾರ್ಯಕ್ರಮದ ಸಲುವಾಗಿ ನಡೆದ ಸಂವಾದದಲ್ಲಿ ಅವರು ಈ ಹೇಳಿಕೆ ನಿಡಿದ್ದಾರೆ.
"ಗಡಿ ಕಾವಲು ಪಡೆಯವರು ಇದುವರೆಗೆ ಹಿಡಿದ ಯಾವುದೇ ರೊಹಿಂಗ್ಯಾಗಳಿಂದ  ಶಸ್ತ್ರಾಸ್ತ್ರಗಳನ್ನು, ಯುದ್ಧಸಾಮಗ್ರಿ ಅಥವಾ ಭಯೋತ್ಪಾದಕ ಸಂಪರ್ಕವನ್ನು ಕುರಿತ ಅಧಿಕೃತ ಮಾಹಿತಿ ಪಡೆದಿಲ್ಲ.  ಆದರೆ , ಅವರು ಭಯೋತ್ಪಾದನೆ ಸಂಘಟನೆಗಳೊಡನೆ ಸಂಪರ್ಕ ಹೊಂದಿರುವ ಬಗೆಗೆ ಗಂಭೀರವಾದ ಆರೋಪವಿದೆ.ಇದರಲ್ಲಿ ಯಾವ ಅನುಮಾನವಿಲ್ಲ". ಶರ್ಮಾ 
"ಇತ್ತೀಚಿನ ದಿನಗಳಲ್ಲಿ 9-10 ಲಕ್ಷ ರೊಹಿಂಗ್ಯಾ ಜನರು ಮಯನ್ಮಾರ್ ನಿಂದ ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದಾರೆ ಅವರು ಭಾರತಕ್ಕೆ ಬರುವುದನ್ನು ತಡೆಯಬೇಕಿದೆ. ರೋಹಿಂಗ್ಯಾ ಸಮಸ್ಯೆ  ಬಹಳ ಸಂಕೀರ್ಣವಾದ ವಿಷಯವಾಗಿದೆ. ಯಾವುದೇ ಕಾನೂನುಬಾಹಿರ ಬಾಂಗ್ಲಾ ವಲಸಿಗರನ್ನು ಅಥವಾ ರೊಹಿಂಗ್ಯಾ ಗಳನ್ನು ಭಾರತದ  ಒಳಪ್ರವೇಶಿಸಲು ಬಿಡುವುದಿಲ್ಲ ಎನ್ನುವ ನಮ್ಮ ನಿಲುವು  ಬಹಳ ಸ್ಪಷ್ಟವಾಗಿದೆ," ಶರ್ಮಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT