ರಣದೀಪ್ ಸುರ್ಜೇವಾಲ 
ದೇಶ

ಗುಜರಾತ್: ವಿದ್ಯುತ್ ಖರೀದಿಯಲ್ಲಿ 26 ಸಾವಿರ ಕೋಟಿ ರೂ. ಅವ್ಯವಹಾರ; ಕಾಂಗ್ರೆಸ್ ಆರೋಪ

ಅದಾನಿ, ಇಎಸ್ ಎಸ್ ಎ ಆರ್, ಟಾಟಾ ಹಾಗೂ ಚೈನಾ ಲೈಟ್ ಸಂಸ್ಥೆಗಳಿಂದ ಗುಜರಾತ್ ಬಿಜೆಪಿ ಸರ್ಕಾರ ಹೆಚ್ಚಿನ ಬೆಲೆ ಕೊಟ್ಟು ವಿದ್ಯುತ್ ಖರೀದಿ ನಡೆಸಿದೆ. ಇದರಲ್ಲಿ 26 ಸಾವಿರ ಕೋಟಿ ರೂ........

ಅಹಮದಾಬಾದ್:  ಅದಾನಿ, ಇಎಸ್ ಎಸ್ ಎ ಆರ್, ಟಾಟಾ ಹಾಗೂ ಚೈನಾ ಲೈಟ್ ಸಂಸ್ಥೆಗಳಿಂದ ಗುಜರಾತ್ ಬಿಜೆಪಿ ಸರ್ಕಾರ ಹೆಚ್ಚಿನ ಬೆಲೆ ಕೊಟ್ಟು ವಿದ್ಯುತ್ ಖರೀದಿ ನಡೆಸಿದೆ. ಇದರಲ್ಲಿ 26 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
"ಬಿಜೆಪಿ ಸರ್ಕಾರದ ಉದ್ದೇಶವು ನಾಲ್ಕು ಖಾಸಗಿ ವಿದ್ಯುತ್ ಕಂಪನಿಗಳ ಪ್ರಯೋಜನಕ್ಕಾಗಿ ಇದೆ! ಜನರು ಮತ್ತು ರಾಜ್ಯದ ಖಜಾನೆಗೆ ಇದರಿಂದ ನಷ್ಟವಾದರೂ ಸರ್ಕಾರಕ್ಕೆ ಯಾವ ಬಾಧೆ ಇಲ್ಲ" ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗುಜರಾತ್ನಲ್ಲಿರುವ ನಾಲ್ಕು ಖಾಸಗಿ ಕಂಪೆನಿಗಳು ಲಾಭಕ್ಕಾಗಿ ವಿದ್ಯುತ್ ಖರೀದಿಯಲ್ಲಿ ಭಾರೀ ಹಗರಣ ನಡೆದಿರುವುದು ಆಘಾತಕಾರಿ ವಿಚಾರವಾಗಿದೆ. ಸರ್ಕಾರಿ ಸ್ವಾಮ್ಯದ ವಿದ್ಯುತ್ ಸ್ಥಾವರಗಳು 8,641 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ, ಆದರೆ "ಆ ಸ್ಥಾವರಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವುದರ ಬದಲು ಕೇವಲ ಶೇ.33 ರಿಂದ 38 ರಷ್ಟು ಮಾತ್ರವೇ ಬಳಸಿಕೊಳ್ಳುತ್ತಾರೆ. ಗುಜರಾತ್ ಸರಕಾರವು ಕೇವಲ 3,283 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ರಾಜ್ಯ ಸ್ವಾಮ್ಯದ ವಿದ್ಯುತ್ ಸ್ಥಾವರಗಳಿಂದ ಉತ್ಪಾದಿಸುತ್ತಿದೆ." ಅವರು ಹೇಳಿದರು.
"ಇದರ ಕಾರಣದಿಂದ ರಾಜ್ಯದ ನಾಲ್ಕು ಖಾಸಗಿ ವಿದ್ಯುತ್ ಉತ್ಪಾದಕ ಸಂಸ್ಥೆಗಳಿಗೆ ಲಾಭವಾಗುತ್ತಿದೆ. ಸರ್ಕಾರವು ಆ ಸಂಸ್ಥೆಗಳಿಂದ ಹೆಚ್ಚಿನ ದರಕ್ಕೆ ವಿದ್ಯುತ್ ನ್ನು ಖರೀದಿಸಿದೆ. ರಾಜ್ಯದಲ್ಲಿ ಬಿಜೆಪಿ ವಿದ್ಯುತ್ ಉತ್ಪಾದನೆ ಯನ್ನು ವ್ಯವಸ್ಥಿತವಾಗಿ ತಗ್ಗಿಸುವುದನ್ನು ಇದು ಸಾಬೀತುಪಡಿಸುತ್ತದೆ."  ಸುರ್ಜೇವಾಲ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT