ದೇಶ

ಮುಂದಿನ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ: ಶಾಗೆ ಆನಂದಿಬೆನ್ ಪತ್ರ

Manjula VN

ಅಹಮದಾಬಾದ್: ಗುಜರಾತ್ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆಗಿಳಿಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿದೆ ಪತ್ರ ಬರೆದಿದ್ದಾರೆಂದು ಮಂಗಳವಾರ ತಿಳಿದುಬಂದಿದೆ. 

ಪಕ್ಷದ 75 ವರ್ಷಗಳ ಮಾನದಂಡದನ್ವಯ, ಚುನಾವಣೆಯಲ್ಲಿ ತಮಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದು ಆನಂದಿ ಬೆನ್ ಅವರು ಪತ್ರದಲ್ಲಿ ಹೇಳಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ. 

2014ರ ಲೋಕಸಭೆ ಚುನಾವಣೆ ಬಳಿಕ, ಆಗ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಸ್ಥಾನ ಏರಿದ್ದರು. ಈ ವೇಳೆ ಆನಂದಿಬೆನ್ ಅವರು ಮೋದಿ ಸ್ಥಾನ ತುಂಬಿದ್ದರು. ಆದರೆ, ಕಳೆದ ವರ್ಷ ಅವರನ್ನು ಬದಲಾಯಿಸಿ ವಿಜಯ್ ರುಪಾನಿ ಅವರನ್ನು ಮುಖ್ಯಮಂತ್ರಿ ಆಗಿ ನೇಮಿಸಲಾಗಿತ್ತು. 
SCROLL FOR NEXT